ಸಂಗೊಳ್ಳಿ ರಾಯಣ್ಣ ಅಬಿಮಾನಿ ಬಳಗ ಉಡುಪಿ ಜಿಲ್ಲೆಯ ವತಿಯಿಂದ ನಿವೃತ್ತಿ ಹೊಂದಿದ ವೀರ ಯೋಧನಿಗೆ “ರಾಯಣ್ಣ ಪುರಸ್ಕಾರ” ಪ್ರದಾನ ಸಮಾರಂಭ ಹಾಗು ಮೆರವಣಿಗೆಯು ದಿನಾಂಕ 06.10.2021, ಬುಧವಾರ ಮಧ್ಯಾಹ್ನ 2.30ಕ್ಕೆ,ಸಂಘಟನೆಯ ಕೇಂದ್ರ ಕಚೇರಿ ಆದಿ ಉಡುಪಿಯ ರಿಗಲ್ ನೆಕ್ಸ್ಟ್ಯನಲ್ಲಿ ನಡೆಯಲಿದೆ.
ಉಡುಪಿ ಶಾಸಕ ರಘುಪತಿ ಭಟ್ ನಿವೃತ್ತ ಯೋಧ ಕೃಷ್ಣ ಶೆಟ್ಟಿಬೆಟ್ಟು ಇವರಿಗೆ ರಾಯಣ್ಣ ಪುರಸ್ಕಾರ ಪ್ರದಾನ ಮಾಡಲಿರುವರು. ಮಾಜಿ ಸಚಿವ ಪ್ರಮೋದ್ ಮದ್ವರಾಜ್ ಮೆರವಣಿಗೆ ಚಾಲನೆ ನೀಡಲಿ ರುವರು. ಸಭಾಧ್ಯಕ್ಷತೆಯನ್ನು ಅಬಿಮಾನಿ ಬಳಗ ಉಡುಪಿ ಜಿಲ್ಲಾಧ್ಯಕ್ಷ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ ಯಶಪಾಲ್ ಸುವರ್ಣ, ಅಬಿಮಾನಿ ಬಳಗದ ರಾಜ್ಯ ಸಂಸ್ಥಾಪಕಾಧ್ಯಕ್ಷ ಸುರೇಶ್ ಗೋಕಾಕ್, ಪತ್ರಕರ್ತ ಜನಾರ್ದನ್ ಕೊಡವೂರು, ಭಾಗ್ಯಶ್ರೀ ಬಾಬಣ್ಣ, ಮಂಜುನಾಥ ನೋಟಗಾರ್, ಮಂಜು ಚಿತ್ರದುರ್ಗ, ಗಣೇಶ್ ಸಿ ಬೆಂಗಳೂರು ಹಾಗು ಗೌರಿ ಕೃಷ್ಣ ಶೆಟ್ಟಿಬೆಟ್ಟು ಭಾಗವಹಿಸಲಿದ್ದಾರೆ.