ಅಂಬಲಪಾಡಿಯಲ್ಲಿ ಯಕ್ಷಗಾನ ಶಿಬಿರ ಉದ್ಘಾಟನೆ.

ಉಡುಪಿ : ಏಪ್ರಿಲ್ 12 ರಿಂದ 10 ದಿನಗಳ ಪರ್ಯಂತ ಶ್ರೀ ಲಕ್ಷ್ಮೀ ಜನಾರ್ದನ ಯಕ್ಷಗಾನ ಕಲಾ ಮಂಡಳಿ ಅಂಬಲಪಾಡಿ ಇದು ಹಮ್ಮಿಕೊಂಡ ಯಕ್ಷಗಾನ ತರಬೇತಿ ಶಿಬಿರವನ್ನು ಖ್ಯಾತ ಉದ್ಯಮಿ, ದಾನಿ ಯು. ವಿಶ್ವನಾಥ ಶೆಣೈಯವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಪ್ರತೀ ದಿನ ಪೂರ್ವಾಹ್ನ 9ರಿಂದ 11:30ರ ತನಕ ಜರಗುವ ಈ ಶಿಬಿರದ ಗುರುಗಳಾಗಿ ಶ್ರೀ ನರಸಿಂಹ ತುಂಗ ಇವರು ಕಾರ್ಯನಿರ್ವಹಿಸಲಿರುವರು. ಮಂಡಳಿಯ ಅಧ್ಯಕ್ಷ ಕೆ. ಅಜಿತ್ ಕುಮಾರ್ ಸ್ವಾಗತಿಸಿದರು. ಯಕ್ಷಗಾನ ಕಲಾರಂಗದ ಅಧ್ಯಕ್ಷರಾದ ಎಮ್. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್, ಪ್ರೊ. ನಾರಾಯಣ ಎಮ್. ಹೆಗಡೆ, ಕೆ. ಜೆ. ಕೃಷ್ಣ, ಪ್ರವೀಣ ಉಪಾಧ್ಯ ಮತ್ತು ಪ್ರಕಾಶ ಹೆಬ್ಬಾರ್ ಉಪಸ್ಥಿತರಿದ್ದರು. ಮಂಡಳಿಯ ಕೋಶಾಧಿಕಾರಿ ಎ. ನಟರಾಜ ಉಪಾಧ್ಯ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

 
 
 
 
 
 
 
 
 
 
 

Leave a Reply