ಮುಂಬೈಯ ಅಹಲ್ಯಾ ಬಲ್ಲಾಳ್ ಅವರಿಗೆ ಮಲಬಾರ್ ವಿಶ್ವರಂಗ ಪುರಸ್ಕಾರ

ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಹಾಗೂ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಉಡುಪಿ ವತಿಯಿಂದ ಮುಂಬೈ ಕನ್ನಡ ರಂಗಭೂಮಿಯ ನಟಿ ಅಹಲ್ಯಾ ಬಲ್ಲಾಳ್ ಅವರು ಉಡುಪಿಗೆ ಬಂದ ಸಂದರ್ಭದಲ್ಲಿ ಉಡುಪಿಯ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ ಶಾಖೆಯಲ್ಲಿ ಮಲಬಾರ್ ವಿಶ್ವರಂಗ ಪುರಸ್ಕಾರ 2021 ನ್ನು ನೀಡಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ಸಂಸ್ಥೆಯ ಗೌರವಾಧ್ಯಕ್ಷ ವಿಶ್ವನಾಥ್ ಶೆಣೈ,ಉಪಾಧ್ಯಕ್ಷರಾದ ಸಂಧ್ಯಾ ಶೆಣಿೈ, ನಾಗರಾಜ್ ಹೆಬ್ಬಾರ್, ಗೌರವ ಸಲಹೆಗಾರರಾದ ಎನ್. ಆರ್ ಬಲ್ಲಾಳ್ , ಸಿ .ಎಸ್ ರಾವ್ ನಾರಾಯಣ ಬಲ್ಲಾಳ್, ನರಸಿಂಹಮೂರ್ತಿ, ಮಲಬಾರ್ ಶಾಖೆಯ ಮುಖ್ಯಸ್ಥ ಹಫಿಜ್ ರೆಹಮಾನ್, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸಂಚಾಲಕ ರವಿರಾಜ್ ಎಚ್.ಪಿ ಪ್ರಧಾನ ಕಾರ್ಯದರ್ಶಿ ಗಿರೀಶ್ ತಂತ್ರಿ, ಸದಸ್ಯರಾದ ಸುಮಿತ್ರ ಕೆರೆಮಠ, ಶಶಿಕಾಂತ್ ಶೆಟ್ಟಿ, ಶ್ರೀ ಲಕ್ಷ್ಮಿ ಆಚಾರ್ಯ, ಮಹೇಶ್ ಮಲ್ಪೆ ಮತ್ತಿತರರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply