ಮಂಗಳೂರಿನಲ್ಲಿ ಬೋಟ್ ದುರಂತ,6ಮಂದಿ ನಾಪತ್ತೆ

  1. ಮಂಗಳೂರು: ಡಿ 1 : ಮೀನುಗಾರಿಕೆಗೆ ತೆರಳಿ ವಾಪಾಸಾಗುತ್ತಿದ್ದ ಬೋಟ್ ಮಗುಚಿ ಬಿದ್ದು 6 ಮಂದಿ ಮೀನುಗಾರರು ನಾಪತ್ತೆಯಾದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಬೋಳಾರದ ಶ್ರೀ ರಕ್ಷಾ ಎಂಬ ಮೀನುಗಾರಿಕಾ ಬೋಟ್ ಸೋಮವಾರ (ನ 30 )  ನಸುಕಿನ ಜಾವ ಮೀನುಗಾರಿಕೆಗೆ ತೆರಳಿತು. ನಿನ್ನೆ ರಾತ್ರಿಯೇ ಆಗಮಿಸ ಬೇಕಿದ್ದ ಈ ಬೋಟ್ ಅಪಘಾತಕ್ಕಿಡಾಗಿದೆ.

ಮೀನು ಓವರ್ ಲೋಡ್ ಹಾಗೂ ಭಾರೀ ಗಾಳಿ ಬೀಸಿದ ಪರಿಣಾಮ ಉಳ್ಳಾಲದ ಪಶ್ಚಿಮ ಭಾಗದ ಹಲವು ನಾಟಿಕಲ್ ಮೈಲ್ ದೂರ ಆಳಸಮುದ್ರದಲ್ಲಿ ಬೋಟ್ ಮಗುಚಿಬಿದ್ದಿದೆ ಎಂದು ತಿಳಿದು ಬಂದಿದೆ.

ದೋಣಿಯಲ್ಲಿ 20 ಕ್ಕೂ ಹೆಚ್ಚು ಮೀನು ಗಾರರಿದ್ದು,ದುರಂತದ ಸಂದರ್ಭ ದಲ್ಲಿ 14 ಮಂದಿ ಡಿಂಗಿಯಲ್ಲಿ ಕುಳಿತು ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. 6 ಮಂದಿ ನಾಪತ್ತೆ ಯಾಗಿದ್ದು, ಸ್ಥಳಕ್ಕೆ ಕರಾವಳಿ ರಕ್ಷಣಾ ಪಡೆ ಧಾವಿಸಿದೆ.

 
 
 
 
 
 
 
 
 
 
 

Leave a Reply