ಉಡುಪಿ ವಿವೇಕಾನಂದ ಯೋಗವಿಜ್ಞಾನ ಕೇಂದ್ರ ಪುತ್ತೂರು ಶಾಖೆ ವತಿಯಿಂದ ಯೋಗ ದಿನಾಚರಣೆ

ವಿವೇಕಾನಂದ ಯೋಗವಿಜ್ಞಾನ ಕೇಂದ್ರ ಉಡುಪಿ ಪುತ್ತೂರು ವತಿಯಿಂದ ಒಂಬತ್ತನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ವಸುದೈವ ಕುಟುಂಬಕಂ ಎಂಬ ಧ್ಯೇಯ ವಾಕ್ಯದಡಿಯಲ್ಲಿ ಪುತ್ತೂರಿನ ಅಂಬೇಡ್ಕರ್ ಭವನದಲ್ಲಿ ಆಚರಿಸಲಾಯಿತು. ಯೋಗ ಗುರುಗಳಾದ ಶ್ರೀ ಪಿ.ವಿ. ಭಟ್,ಶ್ರೀ ಸತೀಶ್ ಕುಂದರ್ ಮತ್ತು ಶ್ರೀ ಪ್ರಮೋದ್ ತಂತ್ರಿ ಉಪಸ್ಥಿತರಿದ್ದು ಯೋಗ ಅಭ್ಯಾಸ ನಡೆಸಿ ಕೊಟ್ಟರು.
ಈ ಸಂದರ್ಭದಲ್ಲಿ ಹಿರಿಯ ಯೋಗ ಗುರುಗಳಾದ ಶ್ರೀ ಸತೀಶ್ ಕುಂದರ್ ಅವರ ಮುಂದಾಳತ್ವದಲ್ಲಿ ವಿದ್ಯಾಸಾಗರ ಎಜುಕೇಶನ್ ಟ್ರಸ್ಟ್ ವತಿಯಿಂದ ಕಾಪುವಿನ ಕೈಪುಂಜಾಲು ನಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಶಾಲೆಗೆ ರೂ. 21,000  ದೇಣಿಗೆಯನ್ನು ಹಸ್ತಾಂತರಿಸಲಾಯಿತು. 
 
ಹಿರಿಯ ಯೋಗಾರ್ಥಿ ಸುನಿತಾ ಚೈತನ್ಯ ಸ್ವಾಗತಿಸಿದರು. ಆರೋಗ್ಯ ಭಾರತಿ ಉಡುಪಿ ಶಾಖೆಯ ಕಾರ್ಯದರ್ಶಿ ಶ್ರೀ ಪ್ರಭಾಕರ್ ಭಟ್, ಯೋಗಾರ್ಥಿಗಳಾದ ರಾಜೇಶ್ವರಿ ಭಟ್, ಕವಿತಾ, ಶಕುಂತಲಾ ಶೆಟ್ಟಿ, ಪ್ರೇಮ, ಅನುಪಮಾ, ಚಂದ್ರ ಪ್ರತಿಮ ಮೊದಲಾದವರು ಉಪಸ್ಥಿತರಿದ್ದರು. ಹಿರಿಯ   ಯೋಗಾರ್ಥಿ ಶ್ರೀಮತಿ ಲಕ್ಷ್ಮೀ ಕುಮಾರಿ ಕಾರ್ಯಕ್ರಮ ನಿರೂಪಿಸಿದರು. ಯೋಗಾರ್ಥಿ ಸುನೀತಾ ಶೆಟ್ಟಿ ವಂದನಾರ್ಪಣೆಗೈದರು.
 
 
 
 
 
 
 
 
 
 
 

Leave a Reply