ಮಧ್ವ -ಯಾನ ಗಾನ ನಮನದ ರಜತ ಸಂಭ್ರಮ ​

ತುಳು ಶಿವಳ್ಳಿ ಮಾದ್ವ ಮಹಾಮಂಡಲ{ತುಶಿಮಾಮ} ಉಡುಪಿ ಇವರಿಂದ, ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಆಶ್ರಯದಲ್ಲಿ, ತುಶಿಮಾಮ ಕಡಿಯಾಳಿ ಅಂಗಸಂಸ್ಥೆಯ  ಸಹಯೋಗದೊಂದಿಗೆ ಕಡಿಯಾಳಿ ಶ್ರೀ ಮಹಿಷ ಮರ್ದಿನಿ ದೇವಸ್ಥಾನದಲ್ಲಿ  ಮಧ್ವ -ಯಾನ ಗಾನ ನಮನದ ರಜತ ಸಂಭ್ರಮ ​ಕಾರ್ಯಕ್ರಮದ ಪ್ರಯುಕ್ತ ಶ್ರೀ ಮದ್ವಾನುಗ್ರಹ ಪ್ರಶಸ್ತಿ ಪ್ರದಾನ ಹಾಗೂ ಮಧ್ವ -ಯಾನ ಗಾನ ನಮನ ಕಾರ್ಯಕ್ರಮ ದಿನಾಂಕ 25.06.2023, ರವಿವಾರ  ಸಂಜೆ ಗಂಟೆ 3:30 ರಿಂದ 7ರವರೆಗೆ ನಡೆಯಲಿದೆ. 

ಸಭಾ ಕಾರ್ಯಕ್ರಮದಲ್ಲಿ  ಪೇಜಾವರ ಮಠ​ದ  ಶ್ರೀಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಆಶೀರ್ವಚನ​ ನೀಡಲಿದ್ದಾರೆ.  ಡಾ​।​ ಕಟ್ಟೆ ರವಿರಾಜ ಆಚಾರ್ಯ​,​ ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ ಕಡಿಯಾಳಿ​ ಇವರು ಅಧ್ಯಕ್ಷತೆ​ ವಹಿಸಲಿದ್ದಾರೆ.  ಮುಖ್ಯ ಅತಿಥಿಗಳಾಗಿ ಕಟೀಲು ಲಕ್ಷ್ಮೀನಾರಾಯಣ ​ಅಸ್ರಣ್ಣ, ಡಾ​।​ ಹರಿಕೃಷ್ಣ ಪುನರೂರು​, ​ ಭುವನಾಭಿರಾಮ ಉಡುಪ​,​ ಎಂ​. ​ಬಿ ಪುರಾಣಿಕ್​,​ ಪ್ರದೀಪ್ ​ಕುಮಾರ್ ​ಕಲ್ಕೂರ​,​ಮಂಜುನಾಥ ಉಪಾಧ್ಯ​,​ ಅರವಿಂದ ಆಚಾರ್ಯ​,​ ರಘುಪತಿ ಉಪಾಧ್ಯ​ ಉಪಸ್ಥಿತರಿರುವರು. 

 
ಶ್ರೀ ಮಧ್ವಾನುಗ್ರಹ ಪ್ರಶಸ್ತಿ​ಯನ್ನು ಹಿರಿಯ ವಿದ್ವಾಂಸರು​,​ ಲೇಖಕರು​,​ ಚಿಂತಕರು​ ​ವಿದ್ವಾನ್ ಸಗ್ರಿ ರಾಘವೇಂದ್ರ ಉಪಾಧ್ಯಾಯ ​ಇವರಿಗೆ ಪ್ರದಾನ ಮಾಡಲಾಗುವುದು ಎಂದು ತುಶಿಮಾಮ ಅಧ್ಯಕ್ಷ ​ರವಿ​​ಪ್ರಕಾಶ್ ಭಟ್ ​ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  ​

 
 
 
 
 
 
 
 
 
 
 

Leave a Reply