ಕೊರೊನಾ ಮಹಾಮಾರಿ ನಿರ್ಮೂಲನೆಗೆ ವಿಷ್ಣುಸಹಸ್ರನಾಮ ಪಾರಾಯಣ ಮತ್ತು ಧನ್ವಂತರಿ ಜಪಾನುಷ್ಠಾನವೇ ಪರಿಹಾರ-  ಶ್ರೀ ಶ್ರೀ ವಿಶ್ವಪ್ರನ್ನತೀರ್ಥ ಶ್ರೀಪಾದರು. 

ಲೋಕದಲ್ಲಿ ಅದೂ ದೇಶದಲ್ಲಿ ಭೀಕರವಾಗಿ ವ್ಯಾಪಿಸುತ್ತಿರುವ ಕೊರೊನಾ ಮಹಾಮಾರಿ ಮತ್ತು ಅದರಿಂದ ಎದುರಾಗುತ್ತಿ ರುವ ಮೃತ್ಯು ಸದೃಶ ಭೀಕರ ಪರಿಣಾಮಗಳಿಗೆ ಅದೇ ಪ್ರಮಾಣದಲ್ಲಿ  ಆಸ್ತಿಕರು ವಿಷ್ಣುಸಹಸ್ರನಾಮ ಪಾರಾಯಣ ಮತ್ತು ಧನ್ವಂತರಿ ಜಪಾನುಷ್ಠಾನವೇ ಪರಿಹಾರ ಎಂದು ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ತಮ್ಮ ಶಿಷ್ಯರೂ ಭಕ್ತರೂ ಬೆಂಗಳೂರಿನ ಮಾಗಡಿ ಸಮೀಪದ ಆನಂದವನದ ಪೂರ್ಣಪ್ರಮತಿ ವಿದ್ಯಾಲಯದ ಸ್ಥಾಪಕರೂ (ಮಾಜಿ ಐಟಿ ಉದ್ಯೋಗಿ ) ಸ್ವಪ್ನ ಸೂಚನೆ ನೀಡಿರುವ ರೋಚಕ ಸಂಗತಿ ತಿಳಿದುಬಂದಿದೆ.
ತಾವು ವೃಂದಾವನ ಪ್ರವೇಶಿಸುವ (ಇಹಲೋಕ ತ್ಯಜಿಸುವ ) ಪೂರ್ವದಲ್ಲಿ ತಿರುಪತಿ ಪ್ರವಾಸದಿಂದ ಮರಳಿಬರುವಾಗ ಆಪ್ತರಲ್ಲಿ ಒಂದು ವಿಷಯವನ್ನು ತಿಳಿಸಿದ್ದು ಅದನ್ನು ತಿಳಿದು ಕೂಡಲೇ ಆಚರಿಸುವಂತೆ ಗುರುಗಳು ತಮ್ಮ ಮೃತ್ತಿಕಾ ವಂದಾವನದ ಸಮೀಪ ಗೋಚರಕ್ಕೆ ಬಂದು  ಸ್ವಪ್ನ ಸೂಚನೆ ನೀಡಿರುವುದಾಗಿ ಶ್ರೀನಿವಾಸ್ ತಿಳಿಸಿದ್ದಾರೆ .‌ಅದರಂತೆ ಶ್ರೀಗಳ ಆಪ್ತರಾಗಿದ್ದ ವಿಷ್ಣುಮೂರ್ತಿ ಆಚಾರ್ಯರಲ್ಲಿ ಈ ಬಗ್ಗೆ ಕೇಳಿದಾಗ ಈ ಎರಡೂ ಲೋಕದ  ಯಾವುದೇ ಮಹಾಮಾರಿ,  ವಿಪತ್ತುಗಳಿಗೂ ಅತ್ಯಂತ ವಿಹಿತ ಪರಿಹಾರ ಎಂದು ಹೇಳಿದ್ದಾಗಿ ತಿಳಿಸಿದರು .

ಅದರಂತೆ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ಇಂದು ಸಾಯಂಕಾಲದಿಂದ ಪ್ರತಿದಿನ ಸಂಜೆ 6 ರಿಂದ 6.45 ರ ವರೆಗೆ ಪೂರ್ಣಪ್ರಮತಿ ವಿದ್ಯಾಲಯದ ಆವರಣದಲ್ಲಿರುವ ಶ್ರೀ ವಿಶ್ವೇಶತೀರ್ಥರ ಶ್ರೀಪಾದರ ಮೃತ್ತಿಕಾ ವೃಂದಾವನ ಸನ್ನಿಧಿಯಲ್ಲಿ ವಿಷ್ಣುಸಹಸ್ರನಾಮ‌ ಪಾರಾಯಣ ಮತ್ತು  ಧನ್ವಂತರೀ ಜಪಾನುಷ್ಠಾನಗಳು ಕೆಲ ಶಿಷ್ಯರಿಂದ ನಡೆಯಲಿದೆ .

ನಾಡಿನಾದ್ಯಂತ ಭಕ್ತರು ಆನ್ ಲೈನ್ ಮೂಲಕ ಇದರಲ್ಲಿ ಭಾಗವಹಿಸಬಹುದು . ಅಥವಾ ತಮ್ಮ ತಮ್ಮ ಮನೆಗಳಲ್ಲಿ ಪ್ರತಿನಿತ್ಯ ಪಾರಾಯಣ ಮತ್ತು ಕನಿಷ್ಠ 108 ಬಾರಿ ಧನ್ವಂತರೀ ಜಪಾನುಷ್ಠಾನವನ್ನು ಶ್ರದ್ಧೆಯಿಂದ ನಡೆಸುವಂತೆ ಶ್ರೀ ವಿಶ್ವಪ್ರನ್ನತೀರ್ಥ ಶ್ರೀಪಾದರು ಕರೆ ನೀಡಿದ್ದಾರೆ

 
 
 
 
 
 
 
 
 
 
 

Leave a Reply