ಕರ್ತವ್ಯ ಬದ್ಧತೆಯೇ ಶಿಸ್ತಿನ ಮೂಲ – ಡಾ.ದಯಾನಂದ ಪೈ.

ಯು.ಪಿ.ಎಂ.ಸಿ- ಎನ್.ಎಸ್.ಎಸ್ ವಿಶೇಷ ಶಿಬಿರ.

ಜ್ಞಾನದಿಂದ ವಿಜ್ಞಾನ, ಜ್ಞಾನ ಸಾಗರದಿಂದ ಯಾರೂ ಒಂದು ಕೊಡ ನೀರು ತಂದಿಲ್ಲ, ಅನುಭವೇ ನಿಜವಾದ ಶಿಕ್ಷಣ, ಕರ್ತವ್ಯ ಬದ್ಧತೆಯೇ ಶಿಸ್ತಿನ ಮೂಲ, ಕೆಲಸದಲ್ಲಿ ಕಾಣುವ ಸಾರ್ಥಕ್ಯ ಜೀವನದ ಸಾರ್ಥಕ್ಯಕ್ಕೆ ಬುನಾದಿಯಾಗುತ್ತದೆ.

ಶಿಸ್ತುಗಳಲ್ಲೂ ವಿವಿಧ ಆಯಾಮಗಳಿವೆ ಅಡುಗೆಮನೆಯ ಶಿಸ್ತು ಡಬ್ಬಗಳ ಜೋಡಣೆಗಳಿಂದ ಕಾಣುತ್ತೇವೆ, ವೇಷಭೂಷಣ ಶಿಸ್ತು ವ್ಯಕ್ತಿಯ ಹುದ್ದೆಯನ್ನು ಬಿಂಬಿಸುತ್ತದೆ, ಮಾತಿನ ಶಿಸ್ತು ವ್ಯಕ್ತಿಯ ಯೋಗ್ಯತೆ ತೋರಿಸುತ್ತದೆ, ಹೀಗೆ ವಿದ್ಯಾರ್ಥಿ ಜೀವನದಲ್ಲೇ ಶಿಸ್ತಿನ ಜೀವನ ಪಾಲನೆ ಮಾಡಬೇಕು ಎಂದು ಕಟಪಾಡಿ ಎಸ್.ವಿ.ಎಸ್ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಡಾ. ದಯಾನಂದ ಪೈ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಎನ್.ಎಸ್.ಎಸ್ ವಾರ್ಷಿಕ ವಿಶೇಷ ಶಿಬಿರದಲ್ಲಿ ನುಡಿದರು.

ಈ ಸಂದರ್ಭದಲ್ಲಿ ಕಾಲೇಜಿನ ಉಪಪ್ರಾಂಶುಪಾಲೆ ಶ್ರೀಮತಿ ಆಶಾಕುಮಾರಿ ಅಧ್ಯಕ್ಷತೆ ವಹಿಸಿದ್ದರು, ಸಂಯೋಜನಾಧಿಕಾರಿ ರಾಜೇಶ್ ಕುಮಾರ್ ಉಪಸ್ಥಿತರಿದ್ದರು. ರಕ್ಷಿತಾ ಸ್ವಾಗತಿಸಿದರು, ದಿಯಾ ಪಾಟ್ಕರ್ ವಂದಿಸಿದರು, ಹಿಮಲ್ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply