ಉಡುಪಿ : ಹಳೇ ವಿದ್ಯಾರ್ಥಿಗಳ ಸಂಘದ 1987-88 ನೇ ಬ್ಯಾಚಿನ ಹಳೆ ವಿದ್ಯಾರ್ಥಿಗಳು ಕಲಿತ ಆದಿ ಉಡುಪಿ ಪ್ರೌಢ ಶಾಲೆಗೆ ಶಾಲಾ ಅಂಗಳಕೆ ಇಂಟರ್ ಲಾಕ್ ಅಳವಡಿಕೆ ಇದರ ಉದ್ಘಾಟನೆ ನೆರವೇರಿಸಿದರು.
ಶಾಲಾ ಮುಖ್ಯಶಿಕ್ಷಕಿ ಕವಿತಾ ರವರ ಬಿಳ್ಕೊಡುಗೆ, ಗುರು ವಂದನೆ ಸಮಾರಂಭ ನೆಡೆಯಿತು. ನಿವೃತ ಶಿಕ್ಷಕಿ ಶಂಕರಿ ಆರ್ ಭಟ್, ರಾಮದಾಸ್ ಭಟ್ , ಡೇವಿಡ್ ಅಲ್ಬರ್ಟ್ ರಿಗೆ ಗುರುವಂದನೆ ಸಲ್ಲಿಸಲಾಯಿತು.
ಶಾಲಾ ಶಿಕ್ಷಣ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಹೆಬ್ಬಾರ್, ಕಾರ್ಯದರ್ಶಿ ಟಿ.ಕೆ ಗಣೇಶ್ ರಾವ್ , ಪ್ರೌಢ ಶಾಲಾ ಘಟಕದ ಅಧ್ಯಕ್ಷ ಸಂತೋಷ್ ಬಲ್ಲಾಳ್ , ಪ್ರಭಾಕರ್ ಶೆಟ್ಟಿ , ವಾಸುದೇವ ಶೆಟ್ಟಿಗಾರ್, ಹಳೇ ವಿದ್ಯಾರ್ಥಿ ಪ್ರತಿನಿಧಿಗಳಾದ ಕೀರ್ತಿ ಶೆಟ್ಟಿ, ಅಮರ್ ಶೆಟ್ಟಿ, ಪೂರ್ಣಿಮಾ ಜನಾರ್ಧನ್ , ಗುರುವಂದನೆ ಸಲ್ಲಿಸಿದರು.
ಪ್ರಭಾರ ಮುಖ್ಯ ಉಪಾದ್ಯಾಯ ರಘುರಾಮ್ ಸ್ವಾಗತಿಸಿ, ಶಿಕ್ಷಕ ಹಾಜೀ ಸಾಹೇಬ್ ಕಾರ್ಯಕ್ರಮ ನಿರೂಪಿಸಿದರು.