​ ರಂಗಭೂಮಿ (ರಿ.)ಉಡುಪಿಯ 41ನೇ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆ–​2020  

ರಂಗಭೂಮಿ (ರಿ.) ಉಡುಪಿ”​ ದಿ​. ​ಡಾ​. ​ಟಿ.ಎಂ.ಎ. ಪೈ, ದಿ​.​ಮಲ್ಪೆ ಮಧ್ವರಾಜ್ ಮತ್ತು ದಿ​.ಎಸ್.ಎಲ್. ನಾರಾಯಣ ಭಟ್ ಸ್ಮಾರಕ​ ​41ನೇ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆ – ​2020

ರಾಜ್ಯದ ಹೆಸರಾಂತ ಹವ್ಯಾಸಿ ನಾಟಕ ಸಂಸ್ಥೆಯಾದ “​ರಂಗಭೂಮಿ (ರಿ.) ಉಡುಪಿ”ಯು ತನ್ನ ​55ನೇ ವರ್ಷ ದಲ್ಲಿ, ದಶಂಬರ್ ತಿಂಗಳ ​3 ಅಥವಾ ​4ನೇ ವಾರದಲ್ಲಿ ದಿ​.ಡಾ​.​ ಟಿ.ಎಂ.ಎ. ಪೈ, ದಿ​. ಮಲ್ಪೆ ಮಧ್ವರಾಜ್ ಮತ್ತು ದಿ​.​ಎಸ್.ಎಲ್. ನಾರಾಯಣ ಭಟ್ ಸ್ಮಾರಕ ರಾಜ್ಯ ಮಟ್ಟದ ​41ನೇ ಕನ್ನಡ ನಾಟಕ ಸ್ಪರ್ಧೆಯನ್ನು ಈ ಬಾರಿ ಕೋವಿಡ್-​19 ​ಸಂಬಧಿಸಿದ ಸರಕಾರದ ಮಾರ್ಗಸೂಚಿಗೆ ಅನುಗುಣವಾಗಿ ನಡೆಸಲಿದೆ. 

ಕರ್ನಾಟಕ ರಾಜ್ಯದ (ಕಾಸರಗೋಡು ಸಹಿತ) ಯಾವುದೇ ಪ್ರದೇಶದ ಹವ್ಯಾಸಿ ನಾಟಕ ತಂಡಕ್ಕೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ. ಕನಿಷ್ಟ ​1 ​ಘಂಟೆ ​30ನಿಮಿಷ ಹಾಗೂ ಗರಿಷ್ಟ ​2 ಘಂಟೆ ​15 ನಿಮಿಷ ಅವಧಿಯ ಸಾಮಾಜಿಕ, ಐತಿಹಾಸಿಕ, ಪೌರಾಣಿಕ, ಜಾನಪದ ಅಥವಾ ಯಾವುದೇ ಪ್ರಕಾರದ ನಾಟಕ ಪ್ರದರ್ಶನ ಮಾಡ ಬಹುದು. ಕೊರೋನಾ ಸಮಸ್ಯೆಯಿಂದಾಗಿ ಈ ಬಾರಿ ಸ್ಪರ್ಧೆಗೆ ಗರಿಷ್ಠ ​7 ತಂಡಗಳನ್ನು ಮಾತ್ರ ಆಯ್ಕೆ ಮಾಡ ಲಾಗುವುದು. 

ವಿಜೇತ ತಂಡಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳೊಂದಿಗೆ ಅನುಕ್ರಮವಾಗಿ ರೂ. ​35,000/-ರೂ.​25,000/- ರೂ.​15,000/- ದ ನಗದು ಬಹುಮಾನಗಳನ್ನು ಹಾಗೂ ಪರ್ಯಾಯ ಫಲಕಗಳನ್ನು ನೀಡ ಲಾಗುವುದು. ಅಲ್ಲದೆ ಶ್ರೇಷ್ಠ ನಿರ್ದೇಶನ, ನಟ, ನಟಿ, ಸಂಗೀತ, ಬೆಳಕು, ರಂಗಪರಿಕರ, ಪ್ರಸಾಧನ, ಬಾಲ​ ​ನಟನೆ/ ಹಾಸ್ಯ ಪಾತ್ರಗಳಿಗೂ ನಗದು ಸಹಿತ ಬಹುಮಾನ ನೀಡಲಾಗುವುದು. 

 
ಭಾಗವಹಿಸುವ ತಂಡಗಳಿಗೆ ಉಚಿತ ಊಟ, ವಸತಿ ಜೊತೆಗೆ ಉಡುಪಿಗೆ ಹೋಗಿ ಬರುವ ಒಟ್ಟು ದೂರಕ್ಕೆ ಕಿ.ಮಿ ಗೆ ರೂ. ​10/- ರಂತೆ ಕನಿಷ್ಠ ರೂ. ​1500/-, ಗರಿಷ್ಠ ರೂ. ​10,000/- ಪ್ರಯಾಣ ವೆಚ್ಚ ನೀಡಲಾಗುವುದು.ತುಂಬಿದ ಪ್ರವೇಶ ಪತ್ರ ಸ್ವೀಕರಿಸಲು ನವಂಬರ್ ​4 ಕೊನೆಯ ದಿನಾಂಕವಾಗಿರುತ್ತದೆ. 
 
ಆಸಕ್ತ ತಂಡಗಳು ಪ್ರವೇಶ ಪತ್ರಕ್ಕಾಗಿ ಪ್ರದೀಪ್‌​ ​ಚಂದ್ರ ಕುತ್ಪಾಡಿ, ಪ್ರಧಾನ ಕಾರ್ಯದರ್ಶಿ, `ರಂಗಭೂಮಿ’, ಕುತ್ಪಾಡಿ, ಉಡುಪಿ-​ ​574 118 ಇವರಿಗೆ ಬರೆಯಬೇಕು. ಮೊಬೈಲ್ ಸಂಖ್ಯೆ :​9448​952847  (ಪ್ರದೀಪ್‌ ಚಂದ್ರ ಕುತ್ಪಾಡಿ) ಅಥವಾ ಉಪಾಧ್ಯಕ್ಷರುಗಳಾದ ನಂದಕುಮಾರ್ ಎಂ. (​9980524431) ಹಾಗೂ ಭಾಸ್ಕರ ರಾವ್ ಕಿದಿಯೂರು (​9844​7421​66) ಇವರನ್ನು ಸಂಪರ್ಕಿಸಬಹುದು. ಹಾಗೆಯೇ ಸ್ಪರ್ಧೆ ನಡೆಯುವ ಸಮಯ ದಲ್ಲಿ ಸರಕಾರದ ಕೋವಿ​​ಡ್ ​19ರ ಮಾರ್ಗಸೂಚಿ/ನಿಬಂಧನೆ  ಬದಲಾದಲ್ಲಿ ನಮ್ಮ ಸಂಸ್ಥೆಯು ಅದಕ್ಕೆ ಬದ್ಧವಾಗಿ ರುತ್ತದೆ ಎಂದು “ರಂಗಭೂಮಿ” ಪ್ರಕಟಣೆ ತಿಳಿಸಿದೆ.
 
 
 
 
 
 
 
 
 
 
 

Leave a Reply