ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷರ ಚುನಾವಣೆಯು 09.05.2021 ರಂದು ಬೆಳಿಗ್ಗೆ 8 ಗಂಟೆಯಿಂದ ಸಾಯಂಕಾಲ 4 ಗಂಟೆಯವರೆಗೆ ನಡೆಯಲಿದೆ.ರಾಜ್ಯ ಘಟಕದ ಕಸಾಪ ಚುನಾವಣೆಗೆ ನಾಡೋಜ ಡಾ ಮಹೇಶ ಜೋಶಿಯವರು ರಾಜ್ಯಾಧ್ಯಕ್ಷ ಸ್ಥಾನದ, “ಸೇವಾಕಾಂಕ್ಷಿ” ಯಾಗಿರುತ್ತರೆ. ಚುನಾವಣಾ ಪ್ರಚಾರಕ್ಕಾಗಿ ಉಡುಪಿ ಜಿಲ್ಲೆಗೆ ಆಗಮಿಸಲಿದ್ದಾರೆ. ಈ ಕೆಳಗೆ ಪ್ರವಾಸದ ವಿವರವನ್ನು ತಿಳಿಸಲಾಗಿದೆ. “ಸಂಪರ್ಕ ಸಭೆ”ಯನ್ನು ಕೆಲವು ಗೌರವಾನ್ವಿತ ಸ್ಥಳೀಯರು ಏರ್ಪಡಿಸಿದ್ದಾರೆ.ನಾಡೋಜ ಮಹೇಶ ಜೋಶಿಯವರ ಮೊಬೈಲ್ ಸಂಖ್ಯೆ 9448490240.
ಉಡುಪಿ ಜಿಲ್ಲಾ ಪ್ರವಾಸದ ವಿವರ
1) 15/03/2021 ಬೆಳಿಗ್ಗೆ 11.00 ಗಂಟೆಗೆ ಉಡುಪಿಯ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿ, ನಂತರ ಕನ್ನಡ ಸಾಹಿತ್ಯ ಪರಿಷತ್ತಿನ ಹಿರಿಯರ ಹಾಗೂ ಗಣ್ಯರ ಭೇಟಿ.
2) 15/03/2021 5:30 ಗಂಟೆಗೆ, ಕಾರ್ಕಳದ ಪ್ರಕಾಶ್ ಹೋಟೆಲ್ ನಲ್ಲಿ ಆಜೀವ ಸದಸ್ಯರ ಸಭೆ.
3) 15/03/2021 ರಾತ್ರಿ 8 ಗಂಟೆಗೆ , ಕುಂದಾಪುರದ ಹೋಟೆಲ್ ಹರ್ಷ, ಶರೋನ್ ಆವರಣದಲ್ಲಿ ಆಜೀವ ಸದಸ್ಯರ ಸಭೆ.
ಎಲ್ಲರೂ ಇದರಲ್ಲಿ ಭಾಗವಹಿಸಲು ನಾಡೋಜ ಮಹೇಶ ಜೋಶಿಯವರ ಚುನಾವಣಾ ಪ್ರಚಾರ ತಂಡ ಮನವಿ ಮಾಡಿಕೊಂಡಿದೆ.