ವಾಲಿಬಾಲ್ ಪಂದ್ಯಾಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ ಮಿಲಾಗ್ರಿಸ್ ವಿದ್ಯಾರ್ಥಿಗಳು

ಉಡುಪಿ : ಕಲ್ಯಾಣಪುರದ ಮಿಲಾಗ್ರಿಸ್ ಆಂಗ್ಲ ಮಾದ್ಯಮ ಪ್ರೌಢಶಾಲೆ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ತೊಡಗಿಕೊಂಡಿದೆ.

ಬೆಂಗಳೂರಿನಲ್ಲಿ ನಡೆದ 16ರ ವಯೋಮಿತಿಯ ಬಾಲಕರ ವಾಲಿಬಾಲ್ ಶಿಬಿರದಲ್ಲಿ ಹತ್ತನೇ ತರಗತಿಯ ಭುವನ್ ಮೇಸ್ತ ಹಾಗೂ 16ರ ವಯೋಮತಿಯ ಬಾಲಕಿಯರ ವಾಲಿಬಾಲ್ ಶಿಬಿರದಲ್ಲಿ ಹತ್ತನೇ ತರಗತಿಯ ಭೂಮಿಕ ಮೇಸ್ತ, ಒಂಬತ್ತನೇ ತರಗತಿಯ ಅನಿಕ ಜೆ.ಕೆ ಮತ್ತು ಯಕ್ಷಾ ಪಾಲ್ಗೊಂಡಿದ್ದರು. ನಂತರ ತಮಿಳುನಾಡಿನ ವೆಲ್ಲೋರಿನ ರಾಣಿಪೆಟ್ನಲ್ಲಿ ಫೆಬ್ರವರಿ 24ರಿಂದ 28ರವರೆಗೆ ನಡೆದ 43ನೆ ರಾಷ್ಟ್ರೀಯ ಸಬ್-ಜೂನಿಯರ್ ವಾಲಿಬಾಲ್ ಪಂದ್ಯಾಕೂಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

 
 
 
 
 
 
 
 
 
 
 

Leave a Reply