ಅದಿತಿ ಆರ್ಟ್ ಗ್ಯಾಲರಿಯಲ್ಲಿ ಜಾನಪದ ಮುಖವಾಡಗಳ ಅಪರೂಪದ ಪ್ರದರ್ಶನ

ಉಡುಪಿ: ವಿಶ್ವದ ಸುಮಾರು ಐವತ್ತು ದೇಶಗಳ ನೂರೈವತ್ತಕ್ಕೂ ಅಧಿಕ ಜಾನಪದ ಮುಖವಾಡಗಳ ಪ್ರದರ್ಶನವನ್ನು ಉಡುಪಿ ಅದಿತಿ ಆರ್ಟ್ ಗ್ಯಾಲರಿಯಲ್ಲಿ ಜೂ. 17 ರಿಂದ ಮೂರುದಿನಗಳ ಕಾಲ ಆಯೋಜಿಸಲಾಗಿದೆ.

ಮುಖವಾಡಗಳು ಕೇವಲ ಚಹರೆಗಳ ಮರೆಮಾಚಲು, ಅಲಂಕಾರಕ್ಕಲ್ಲದೆ ಅರೋಗ್ಯ ವೃದ್ಧಿಸಲು, ಶತ್ರುಬಾಧೆಯನ್ನು ನಿವಾರಿಸಲು ಬಳಸಲಾಗುತಿತ್ತು. ಅನೇಕ ಯುದ್ಧಗಳಲ್ಲಿ ಶತ್ರುವಿನ ದಾಳಿಯನ್ನು ತಡೆಯಲು ಉಪಯೋಗಿಸಲಾಗುತ್ತಿತ್ತು. ಇಂತಹ ಕೆಲವು ಮುಖವಾಡಗಳನ್ನ ಉಡುಪಿ ಭಾಗದ ಕಲಾಸಕ್ತರಿಗೂ ಪರಿಚಯಿಸುವ ದೃಷ್ಟಿ ಯಿಂದ ಈ ವಿಶೇಷ ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದು ಮುಖವಾಡ ಸಂಗ್ರಹಕಾರರೂ, ಅದಿತಿ ಗ್ಯಾಲರಿಯ ಆಡಳಿತ ವಿಶ್ವಸ್ಥರೂ ಆಗಿರುವ ಡಾ|ಕಿರಣ್ ಆಚಾರ್ಯ ಮಾಹಿತಿ ನೀಡಿದರು.

ದಕ್ಷಿಣ ಅಮೇರಿಕ, ಇಟಲಿ, ಶ್ರೀಲಂಕಾ, ಬರ್ಮಾ, ನೇಪಾಳ, ಆಫ್ರಿಕಾ ಮುಂತಾದ ದೇಶಗಳ ಸುಮಾರು ನೂರೈವತ್ತಕ್ಕೂ ಅಧಿಕ ಮುಖವಾಡಗಳನ್ನು ಕಲಾ ಪೂರ್ಣವಾಗಿ ಜೋಡಿಸಿ ಇಡಲಾಗಿದೆ. ಅಧ್ಯಯನ ಆಸಕ್ತರಿಗಾಗಿ ಮುಖವಾಡದ ಸಂಕ್ಷಿಪ್ತ ವಿವರಣೆಯನ್ನೂ ಬರೆದಿಡಲಾಗಿದೆ ಎಂದೂ ಅವರು ವಿವರಿಸಿದರು.

ಜೂ 16 ರಂದು ಸಂಜೆ 5.15 ಕ್ಕೆ ಉಡುಪಿ ಜಿಲ್ಲಾಧಿಕಾರಿ ಶ್ರೀ ಕೂರ್ಮ ರಾವ್ ಉದ್ಘಾಟಿಸಲಿದ್ದಾರೆ. ಯೂನಿಯನ್ ಬ್ಯಾಂಕಿನ ಡಿ ಜಿ ಎಮ್ ಡಾ | ಎಚ್ ಟಿ ಎಂ ವಾಸಪ್ಪ, ಮುಂಬೈಯ ಕಲೋಪಾಸಕ ಅರವಿಂದ ವ್ಯಾಸರಾಯ ಬಲ್ಲಾಳ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಜೂ 17 ರಿಂದ ಜೂ. 19 ರವರೆಗೆ ಬೆಳಗ್ಗೆ 10 ರಿಂದ ಸಂಜೆ 8 ರವರೆಗೆ ಪ್ರದರ್ಶನ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಈ ಸಂದರ್ಭದಲ್ಲಿ ಆಸ್ಟ್ರೋ ಮೋಹನ್ ಉಪಸ್ಥಿತರಿದ್ದರು 

 
 
 
 
 
 
 
 
 
 
 

Leave a Reply