ಮುಖವಾಡಗಳ ನೋಡ ಬನ್ನಿ

ಉಡುಪಿ : ವಿಶ್ವದ ಸುಮಾರು ಐವತ್ತು ದೇಶಗಳ ನೂರೈವತ್ತಕ್ಕೂ ಅಧಿಕ ಜಾನಪದ ಮುಖವಾಡಗಳ ಪ್ರದರ್ಶನವನ್ನು ಉಡುಪಿ ಜಿಲ್ಲಾಧಿಕಾರಿ ಶ್ರೀ ಕೂರ್ಮ ರಾವ್ ಅವರು ಉಡುಪಿ  ಅದಿತಿ ಆರ್ಟ್ ಗ್ಯಾಲರಿಯಲ್ಲಿ ಉದ್ಘಾಟಿಸಿದರು.
ಮುಂಬೈಯ ಕಲೋಪಾಸಕ ಅರವಿಂದ ವ್ಯಾಸರಾಯ ಬಲ್ಲಾಳ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಜಾನಪದ ಮುಖವಾಡಗಳ ಪ್ರದರ್ಶನವನ್ನು ಉಡುಪಿ  ಅದಿತಿ ಆರ್ಟ್ ಗ್ಯಾಲರಿಯಲ್ಲಿ ಜೂ .17 ರಿಂದ ಮೂರುದಿನಗಳ ಕಾಲ ಆಯೋಜಿಸಲಾಗಿದೆ.
ಮುಖವಾಡಗಳು ಕೇವಲ ಚಹರೆಗಳ ಮರೆಮಾಚಲು, ಅಲಂಕಾರಕ್ಕಲ್ಲದೆ ಅರೋಗ್ಯ ವೃದ್ಧಿಸಲು, ಶತ್ರುಬಾಧೆಯನ್ನು ನಿವಾರಿಸಲು ಬಳಸಲಾಗುತಿತ್ತು. ಅನೇಕ ಯುದ್ಧಗಳಲ್ಲಿ ಶತ್ರುವಿನ ದಾಳಿಯನ್ನು ತಡೆಯಲು ಉಪಯೋಗಿಸಲಾಗುತ್ತಿತ್ತು. ಇಂತಹ ಕೆಲವು ಮುಖವಾಡಗಳನ್ನ ಉಡುಪಿ ಭಾಗದ ಕಲಾಸಕ್ತರಿಗೂ ಪರಿಚಯಿಸುವ ದೃಷ್ಟಿಯಿಂದ ಈ ವಿಶೇಷ ಪ್ರದರ್ಶನ.
ದಕ್ಷಿಣ ಅಮೇರಿಕ, ಇಟಲಿ, ಶ್ರೀಲಂಕಾ, ಬರ್ಮಾ, ನೇಪಾಳ, ಆಫ್ರಿಕಾ ಮುಂತಾದ ದೇಶಗಳ ಸುಮಾರು ನೂರೈವತ್ತಕ್ಕೂ ಅಧಿಕ ಮುಖವಾಡಗಳನ್ನು ಕಲಾ ಪೂರ್ಣವಾಗಿ ಜೋಡಿಸಿ ಇಡಲಾಗಿದೆ. ಅಧ್ಯಯನ ಆಸಕ್ತರಿಗಾಗಿ ಮುಖವಾಡದ ಸಂಕ್ಷಿಪ್ತ ವಿವರಣೆಯನ್ನೂ ಬರೆದಿಡಲಾಗಿದೆ ಎಂದೂ ಅವರು ವಿವರಿಸಿದರು. ಗ್ಯಾಲರಿಯ ಆಡಳಿತ ವಿಶ್ವಸ್ಥ ಹಾಗೂ ಮುಖವಾಡಗಳ ಸಂಗ್ರಹಕಾರ ಸ್ವಾಗತಿಸಿದರು. ಆಸ್ಟ್ರೋ ಮೋಹನ್ ನಿರೂಪಿಸಿದರು.  ಪ್ರತಿಮಾ ಕಿರಣ್ ಧನ್ಯವಾದವಿತ್ತರು.
   
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply