ಛಾಯಾಗ್ರಾಹಣ ಕ್ಷೆತ್ರದಲ್ಲಿ ವಿಶಿಷ್ಟ ಸಾಧನೆಗೈದ ನವೀನ್ ಚಂದ್ರ ಬಲ್ಲಾಳ್ ರವರಿಗೆ ರಾಜ್ಯಮಟ್ಟದ ಪುರಸ್ಕಾರ

ಸೌತ್ ಕೆನರಾ ಫೋಟೋಗ್ರಾಪರ್ಸ್ ಅಸೋಶಿಯೇಷನ್ ಉಡುಪಿ ವಲಯದ ಗೌರವಧ್ಯಕ್ಷ, ಉಪಾಧ್ಯಕ್ಷರಾಗಿ, ಕೇಂದ್ರ ಸಮಿತಿಯ ವಿವಿಧ ಹುದ್ದೆಯನ್ನು ನಿಭಾಯಿಸಿ ಸೈ ಏಣಿಸಿ ಕೊಂಡವರು ಉಡುಪಿ ನವೀನ್ ಸ್ಟುಡಿಯೋ ಮಾಲಕ ನವೀನ್ ಚಂದ್ರ ಬಲ್ಲಾಳ್ ರವರು.

ಸಂಘಟನೆಯನ್ನು ಕಟ್ಟಿ ಬೆಳೆಸುವಲ್ಲಿ ಮಹತ್ತರವಾದ ಕೊಡುಗೆಯನ್ನು ನೀಡಿದವರು. ಸಾಮಾಜಿಕ, ಧಾರ್ಮಿಕವಾಗಿ ಜನರಿಗೆ ತೀರಾ ಹತ್ತಿರವಾದವರು ಬಲ್ಲಾಳ್ ರವರು. ಲಯನ್ಸ್ ಸಂಘಟನೆಯಲ್ಲಿ ತನ್ನನ್ನು ವಿಶೇಷವಾಗಿ ತೊಡಗಿಸಿಕೊಂಡವರು.

ಛಾಯಾಗ್ರಹಣ ಕ್ಷೆತ್ರಕ್ಕೆ ತನ್ನ ಹಲವಾರು ಶಿಷ್ಯವರ್ಗವನ್ನು ಕೊಡುಗೆಯಾಗಿ ನೀಡಿದವರು. ವಾಜಪೇಯಿ, ಇಂದಿರಾಗಾಂಧಿ, ರಾಜೀವ ಗಾಂಧಿ, ಸೋನಿಯಾ ಗಾಂಧಿ ಮುಂತಾದ ಗಣ್ಯರು ಉಡುಪಿಗೆ ಬಂದಾಗ ಅಧಿಕೃತ ಛಾಯಾಗ್ರಾಹಕರಾಗಿ ಹಾಗು ಉಡುಪಿ ಜಿಲ್ಲೆ ಪ್ರಾರಂಭವಾಗಿನಿಂದ ಇಂದಿನ ತನಕ ಉಡುಪಿ ಜಿಲ್ಲಾಡಳಿತದ ಫೋಟೋಗ್ರಾಫರ್ ಆಗಿ ದುಡಿಯುತ್ತಿದ್ದಾರೆ.

ತುಳುಕೂಟ, ಉಡುಪಿ ಭಂಟರ ಸಂಘ ಇಂತಹ ಸಮಾಜ ಮುಖಿ ಸಂಘಟನೆಗಳಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿರುವರು. ವಿದ್ಯಾಭ್ಯಾಸಕ್ಕೆ, ಮನೆಕಟ್ಟುವವರಿಗೆ ಆರ್ಥಿಕ ಸಹಾಯವನ್ನು ನಿರಂತರವಾಗಿ ಮಾಡುತ್ತಿದ್ದಾರೆ.  

ಅರ್ಹವಾಗಿಯೇ ನವೀನ್ ಚಂದ್ರ ಬಲ್ಲಾಳ್ ರವರಿಗೆ ಈ ಬಾರಿಯ ಕರ್ನಾಟಕ ರಾಜ್ಯ ಫೋಟೋಗ್ರಾಪರ್ಸ್ ಸಂಸ್ಥೆಯವರು ನೀಡುವ ರಾಜ್ಯಮಟ್ಟದ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.

 
 
 
 
 
 
 
 
 
 
 

Leave a Reply