ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ವತಿಯಿಂದ ವಿವಿಧ ದಿನಾಚರಣೆ

ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ತಿನಿಂದ ಭಾನುವಾರ ಜುಲೈ 23 ರ ಸಂಜೆ 4:30ಕ್ಕೆ ಗುಂಡಿಬೈಲು ಬ್ರಾಹ್ಮಿ ಸಭಾ ಭವನದಲ್ಲಿ ವಿಪ್ರ ಪುರುಷ ದಿನಾಚರಣೆ, ವೈದ್ಯರ ದಿನಾಚರಣೆ, ಪತ್ರಿಕಾ ದಿನಾಚರಣೆ, ಲೆಕ್ಕ ಪರಿಶೋಧಕರ ದಿನಾಚರಣೆ ಹಾಗೂ ಗುರುವಂದನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಖ್ಯಾತ ಆಯುರ್ವೇದ ವೈದ್ಯ ಮತ್ತು ಔಷಧೀಯ ಸಸ್ಯ ತಜ್ಞ ಡಾ. ಶ್ರೀಧರ ಬಾಯರಿ, ಹಿರಿಯ ಲೆಕ್ಕ ಪರಿಶೋಧಕ ಟಿ. ಪ್ರಶಾಂತ ಹೊಳ್ಳ, ಪತ್ರಕರ್ತ ಎಚ್. ಮೋಹನ್ ಉಡುಪ, ನಿವೃತ್ತ ಮುಖ್ಯೋಪಾಧ್ಯಾಯ ಶ್ರೀ ಎಸ್. ವಿ. ಭಟ್ ಇವರನ್ನು ಗೌರವಿಸ ಲಾಗುವುದು.

ಮುಖ್ಯ ಅತಿಥಿಗಳಾಗಿ ಪೂರ್ಣಪ್ರಜ್ಞ ಸಮೂಹ ವಿದ್ಯಾ ಸಂಸ್ಥೆಗಳ ಗೌರವ ಆಡಳಿತಗಾರರಾದ ಪ್ರೊ. ಎ.ಪಿ. ಭಟ್ ಮತ್ತು ಮಕ್ಕಳ ಕಲ್ಯಾಣ ಸಮಿತಿಯ ಮಾಜಿ ಮುಖ್ಯಸ್ಥರಾದ ಶ್ರೀ ಬಿ.ಕೆ. ನಾರಾಯಣ ಇವರು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಅಶಕ್ತರಿಗೆ ಧನಸಹಾಯ, ಔಷಧೀಯ ಸಸ್ಯ ವಿತರಣೆ ಹಾಗೂ ವಿವಿಧ ಮೋಜಿನ ಆಟಗಳನ್ನು ಆಯೋಜಿಸಲಾಗಿದೆ ಎಂದು ಯುವ ಬ್ರಾಹ್ಮಣ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಚೈತನ್ಯ ಎಂ ಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply