ವಿದ್ಯುತ್ ಗುತ್ತಿಗೆದಾರ ಸಂಘಕ್ಕೆ ಕೋಟ ಶ್ರೀಕಾಂತ್ ಶೆಣೈ ಆಯ್ಕೆ

ಕೋಟ: ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಬೆಂಗಳೂರು ಇದರ ಉಡುಪಿ ಜಿಲ್ಲಾಧ್ಯಕ್ಷರಾಗಿ ಕೋಟದ ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಶೆಣೈ ಆಯ್ಕೆಯಾಗಿದ್ದಾರೆ.

ಕಾರ್ಯದರ್ಶಿಯಾಗಿ ಸುರೇಶ್ ಪೂಜಾರಿ ಕಲ್ಯಾಣಪುರ,ಉಪಾಧ್ಯಕ್ಷರಾಗಿ ಅಶೋಕ್ ಸುವರ್ಣ ಕಾರ್ಕಳ,ಕೃಷ್ಣ ಕುಲಾಲ್ ಉಡುಪಿ,ಜೊತೆಕಾರ್ಯದರ್ಶಿಯಾಗಿ ರವಿಚಂದ್ರ ವಿ.ಕೆ ಬೈಂದೂರು, ಕೋಶಾಧಿಕಾರಿಯಾಗಿ ಆನಂದ ಸೇರಿಗಾರ್ ಉಡುಪಿ,ಸಂಘಟನಾ ಕಾರ್ಯದರ್ಶಿಯಾಗಿ ಜಯಸುದರ್ಶನ ತೆಕ್ಕಟ್ಟೆ ಆಯ್ಕೆಯಾಗಿದ್ದಾರೆ. ಇತ್ತೀಚಿಗೆ ಉಡುಪಿಯಲ್ಲಿ ನಡೆದ ಚುನಾವಣೆಯಲ್ಲಿ ಈ ಆಯ್ಕೆ ನಡೆದಿದೆ.

 
 
 
 
 
 
 
 
 
 
 

Leave a Reply