ರೋಟರಿ ಕ್ಲಬ್ ಉಡುಪಿ ವಲಯ 4, ಅಂ.ರಾ.ಜೆಲ್ಲೆ 3182 ಪಬ್ಲಿಕ್ ಟಿವಿ ಜಂಟಿಯಾಗಿ ಆಯೋಜಿಸಿದ ಹತ್ತನೆ ತರಗತಿಯಲ್ಲಿ ಕಲಿಯುತ್ತಿರುವ ವಿಧ್ಯಾರ್ಥಿಗಳಿಗೆ ಉಚಿತವಾಗಿ ನೀಡುವ ಕಂಪ್ಯೂಟರ್ ಟ್ಯಾಬ್ ನೀಡುವ ಕಾರ್ಯಕ್ರಮವು ಉಡುಪಿಯ ಸೈಂಟ್ ಮೇರಿಸ್ ಪ್ರೌಢ ಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮ ವನ್ನು ಉದ್ಘಾಟಿಸಿದ ಸಂಸ್ಥೆಯ ಸಂಚಾಲಕರಾದ ರೆ.ಫಾದರ್ ಚಾರ್ಲ್ಸ್ ಮೆನೇಜಸ್ ಅವರು ರೋಟರಿಯ ಈ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಬಹಳ ಉಪಯುಕ್ತ ಮತ್ತು ಅದರ ಸದುಪಯೋಗ ವನ್ನು ಪಡೆಯುವಂತೆ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಡಯಟ್ ನ ಉಪಪ್ರಾಂಶುಪಾಲ, ಶಿಕ್ಷಣ ತಜ್ಞ ಶ್ರೀ ಅಶೋಕ ಕಾಮತ್ ಅವರು ಪ್ರಸಕ್ತ ಪರಿಸ್ಥಿತಿ ಯಲ್ಲಿ ವಿದ್ಯಾರ್ಥಿಗಳ ಜವಾಬ್ದಾರಿ ಬಗ್ಗೆ ವಿವರವಾಗಿ ತಿಳಿ ಹೇಳಿದರು. ಜೋನಲ್ ಲೆಫ್ಟಿನೆಂಟ್ ರೋ.ಶಂಕರ ಪೂಜಾರಿ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀ ಸಂದೀಪ್ ರೈ ಅವರು ಕಾರ್ಯಕ್ರಮ ಕ್ಕೆ ಶುಭ ಹಾರೈಸಿದರು.
ಶ್ರೀಮತಿ ಜೋಯ್ಸಡೀಸ ಮುಖ್ಯೋಪಾಧ್ಯಾಯರು ಸ್ಬಾಗತಿಸಿದರು.ಉಡುಪಿ ರೋಟರಿ ಅಧ್ಯಕ್ಷರಾದ ರಾಧಿಕ ಲಕ್ಷ್ಮಿ ನಾರಾಯಣ ಅವರು, ಕಾರ್ಯದರ್ಶಿ, ರೋ. ದೀಪಾ ಭಂಡಾರಿ ಅವರು ಉಪಸ್ಥಿತ ರಿದ್ದರು. ರೋ.ರಾಮಚಂದ್ರ ಉಪಾಧ್ಯಾಯ ರು ಕಾರ್ಯಕ್ರಮ ವನ್ನು ಸಂಯೋಜಿಸಿದ್ದರು.