ಬಲೆ ತುಳು ಲಿಪಿ ಕಲ್ಪುಗ ಕಾರ್ಯಗಾರದ ಸಮಾರೋಪ ಸಮಾರಂಭ

ಉಡುಪಿ: ಕೊಡವೂರು ಶಂಕರನಾರಾಯಣ ದೇವಸ್ಥಾನದಲ್ಲಿ ಶ್ರೀ ಶಂಕರನಾರಾಯಣ ದೇವಸ್ಥಾನದ ಮುಂದಾಳತ್ವದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಜೈ ತುಳುನಾಡ್ (ರಿ.) ಮತ್ತು ಹಳೆ ವಿದ್ಯಾರ್ಥಿ ಸಂಘ ಹಾಗೂ ಯುವಕ ಸಂಘ (ರಿ.) ಕೊಡವೂರು ಇವರ ಸಹಯೋಗದೊಂದಿಗೆ ಬಲೆ ತುಳು ಲಿಪಿ ಕಲ್ಪುಗ ಕಾರ್ಯಗಾರದ ಸಮಾರೋಪ ಸಮಾರಂಭ ದ ಕಾರ್ಯಕ್ರಮ ಮಾ.14ರಂದು ನಡೆಯಿತು.

 ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಡಾ| ಆಕಾಶ್ ರಾಜ್ ಜೈನ್ ಮಾತನಾಡಿ “ತುಳು ಲಿಪಿ ಇನ್ನಷ್ಟು ಆಧುನಿಕತೆ ತಂತ್ರಜ್ಞಾನಕ್ಕೆ ಬಂದು ಪ್ರತಿ ಊರುಗಳಲ್ಲಿಯೂ ಪರಿಚಯ ಆಗುವಂತೆ ಆಗಬೇಕು , ಯುವಪೀಳಿಗೆ ತುಳು ಲಿಪಿಯನ್ನು ಮುಂದೆ ಕೊಂಡು ಹೋಗುವ ಜವಾಬ್ದಾರಿಯನ್ನ ತೆಗೆದುಕೊಳ್ಳಬೇಕು ಎಂದರು.

 ಪ್ರಕಾಶ್ ಜಿ ಕೊಡವೂರು ಮಾತಾಡಿ . ” ತುಳು ಲಿಪಿ ತುಳು ಸಂಸ್ಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಜನರು ಇನ್ನಷ್ಟು ತುಳು ಲಿಪಿ ಕಲಿಯಬೇಕು ಎಂದು ಹೇಳಿದರು.

ಈ ವೇಳೆ ಕೊಡವೂರು ಶಾಲೆಯಲ್ಲಿ 1992 – 1998 ಬ್ಯಾಚ್ ನ ಪರವಾಗಿ ಕೊಡವೂರು ಟೀಚರ್ ಶ್ರೀಮತಿ ಮಲ್ಲಿಕಾ ದೇವಿ ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಜೈ ತುಳುನಾಡ್ (ರಿ.) ವತಿಯಿಂದ ಕೊಡವೂರು ಶಾಲೆಯಲ್ಲಿ 36 ವರ್ಷ ಸೇವೆ ಮಾಡಿದ ಹಾಗೆಯೇ ಕೊಡವೂರು ಶಾಲೆಯಲ್ಲಿ ತುಳು ಲಿಪಿ ಬೆಳವಣಿಗೆಗೆ ನಿರಂತರವಾಗಿ ಬೆನ್ನೆಲುಬಾದ ಮಲ್ಲಿಕಾ ದೇವಿ ಇಗೆ ಸನ್ಮಾನಿಸಲಾಯಿತು.

 ಕೊಡವೂರಿನಲ್ಲಿ ಅತೀ ಹೆಚ್ಚು ಮಂದಿ ತುಳು ಲಿಪಿ ಕಲ್ತಿದ್ದಾರೆ, ಹಾಗೆ ತುಳು ಲಿಪಿ ಟೀಚರ್ ಕೂಡ ಇದ್ದಾರೆ ಸರಿ ಸುಮಾರು 300 ಜನ ಲಿಪಿ ಕಲಿಯುವ ಆಸಕ್ತಿ ತೋರಿಸಿರುವುದು ನಿಜಕ್ಕೂ ಶ್ಲಾಘನೀಯ.ಇದೆ ಸಮಯದಲ್ಲಿ ಕಾರ್ಯಕ್ರಮ ದಲ್ಲಿ ತುಲು ಲಿಪಿ ಪರೀಕ್ಷೆ ಬರೆದು ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಿದರು.

ಕೊಡವೂರು ಶಂಕರನಾರಾಯಣ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಪ್ರಕಾಶ್. ಜಿ ಕೊಡವೂರು,ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಡಾ. ಆಕಾಶ್ ರಾಜ್ ಜೈನ್ ಮತ್ತು ತಾರಾ ಉಮೇಶ್ ಆಚಾರ್ಯ,ಕೊಡವೂರು ಶಂಕರನಾರಾಯಣ ವ್ಯವಸ್ಥಾಪನ ಸಮಿತಿಯ ಸದಸ್ಯ ಜನಾರ್ಧನ್ ಕೊಡವೂರು, ಟೈಮ್ಸ್ ಆಫ್ ಕುಡ್ಲ ಪತ್ರಿಕೆಯ ಪ್ರಭಂದಕಿ ಯಶೋಧ ಕೇಶವ, ರಾಮ ಶೇರಿಗಾರ್,ಕೊಡವೂರು ಶಾಲಾ ಶಿಕ್ಷಕಿ ಮಲ್ಲಿಕಾ ದೇವಿ, ಶರತ್ ಕೊಡವೂರು,ಸ್ವಾತಿ ಸುವರ್ಣ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ಕೊಡವೂರು, ಜೈ ತುಳುನಾಡ್ ಸಂಘದ ಅಧ್ಯಕ್ಷ ಸುದರ್ಶನ್ ಸುರತ್ಕಲ್, ಉಜ್ವಲ ಪೂಜಾರಿ ಉಪಸ್ಥಿತರಿದ್ದರು.

ರಾಜೇಶ್ ತುಳುವೆ ಸ್ವಾಗತಿಸಿ, ಬನಶ್ರೀ ಕಲ್ಮಾಡಿ ವಂದಿಸಿದರು, ಸ್ವಾತಿ ಸುವರ್ಣ ಮತ್ತು ರಮ್ಯ ಬಹುಮಾನ ವಿತರಣಾ ಕಾರ್ಯಕ್ರಮ ನಡೆಸಿಕೊಟ್ಟರು,ಸುಷ್ಮಾ ದೇವಾಡಿಗ ಕಾರ್ಯಕ್ರಮ ದ ನಿರೂಪಣೆ ಗೈದರು, ಶರತ್ ಕೊಡವೂರು ಪ್ರಾಸ್ತಾವಿಕ ಭಾಷಣ ಮಾಡಿದರು .

 
 
 
 
 
 
 
 
 
 
 

Leave a Reply