ವಿಶಿಷ್ಟ ವ್ಯಕ್ತಿತ್ವದ ನಾಡೋಜ ಪ್ರೊ.ಕೆ.ಪಿ.ರಾಯರು ~ ಡಾ ಪಾದೇಕಲ್ಲು ವಿಷ್ಣು ಭಟ್  

“ನಾಡೋಜ ಪ್ರೊ ಕೆ ಪಿ ರಾವ್ ಅವರು ಬಹುಮುಖ ವ್ಯಕ್ತಿತ್ವವುಳ್ಳವರು. ವಿಜ್ಞಾನ, ವೇದಗಳು, ಪಾಣಿನಿಯ ವ್ಯಾಕರಣ ಸೂತ್ರಗಳು, ಪಶ್ಚಿಮದ ವಿದ್ವಾಂಸರು ನಮ್ಮ ಪ್ರಾಚೀನ   ಗ್ರಂಥಗಳನ್ನು ಕುರಿತು ನಡೆಸಿದ ಅಧ್ಯಯನ ಎಲ್ಲವನ್ನೂ ಪರಿಶೀಲಿಸಿದವರು. ವೇದಗಳನ್ನು  ವಿದ್ಯುಕ್ತ ಉಚ್ಚಾರದ ಮೂಲಕ ತಲೆಮಾರಿನಿಂದ ತಲೆಮಾರಿಗೆ ದಾಟಿಸಿದ ಸಾಧನೆ ವೇದಾಧ್ಯಾಯಿಗಳದು ಎಂದು ಪ್ರತಿಪಾದಿಸುವ ಪ್ರೊ ಕೆ ಪಿ ರಾಯರದು ವಿಶಿಷ್ಟ ವ್ಯಕ್ತಿತ್ವ” ಎಂದು  ಡಾ ಪಾದೇಕಲ್ಲು ವಿಷ್ಣು ಭಟ್   ಹೇಳಿದರು. 
ಅವರು ಪರ್ಕಳದ ಸರಿಗಮ ಭಾರತಿ ಸಂಗೀತ ವಿದ್ಯಾಲಯದ ವೇದಿಕೆಯಲ್ಲಿ ಡಾ. ಎನ್.ಟಿ. ಭಟ್ಟರು ಬರೆದ “ನಾಡೋಜ ಕೆ.ಪಿ.ರಾಯರ ನಾಡಿ, ನುಡಿ, ನಡೆ” ಪುಸ್ತಕ ಲೋಕಾರ್ಪಣೆ ಸಂದರ್ಭದಲ್ಲಿ ಅಧ್ಯಕ್ಷ ಸ್ಥಾನದಿಂದ  ಮಾತನಾಡುತ್ತಿದ್ದರು.  ಡಾ.ಎನ್ ಟಿ.ಭಟ್ ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು. ಡಾ.ಉದಯ ಶಂಕರ್ ಕೆ.ಪಿ ರಾವ್ ಹಾಗೂ ಎನ್.ಟಿ ಭಟ್ಟರ ನ್ನು ಅಭಿನಂದಿಸಿದರು. 
ಡಾ.ಜನಾರ್ದನ ಭಟ್ ಬೆಳ್ಮಣ್ಣು ಕೃತಿ ಪರಿಚಯ ಮಾಡುತ್ತ ಅದು ಕೆ ಪಿ ರಾಯರ ವಿಶಿಷ್ಟ ಅನುಭವ ಗಳನ್ನೂ ಅವರ ಪ್ರಕಟವಾಗಲಿರುವ ಕಾದಂಬರಿಯ ಸಾರವನ್ನೂ ಒಳಗೊಂಡಿದೆ ಎಂದು ನುಡಿದರು. ಪ್ರೊ ಕೆ ಪಿ ರಾವ್ ಅವರು ವೇದಗಳು ಜ್ಞಾನಿಗಳ ಉಕ್ತಿಗಳೆಂದು, ನಾರಾಯಣ ಭಟ್ಟ ತಿರಿಯವರು ಪಾಣಿನಿಯವರ ಅನಂತರದ ಮಹಾ ವ್ಯಾಕರಣಕಾರರೆಂದು ತಿಳಿಸಿದರು. 
ಎನ್ ಟಿ  ಭಟ್ಟರು ಕೆ ಪಿ ರಾಯರ ವಿಚಾರಗಳು ತಮ್ಮ ಪುಸ್ತಕದಲ್ಲಿ  ಅಡಕಗೊಂಡಿವೆ ಎಂದರು. ವಿದುಷಿ ಸರೋಜ ಆಚಾರ್ಯ ಪ್ರಾರ್ಥಿನೆಗೈದರೆ, ಶ್ರೀಮತಿ ಉಮಾಶಂಕರಿ ವಂದಿಸಿದರು. ಶ್ರೀನಿವಾಸ ಉಪಾಧ್ಯಾಯರು  ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದ ಪೂರ್ವಭಾವಿ ಯಾಗಿ ಶ್ರೀ ಶರತ್ ಹಳೆಯಂಗಡಿಯವರಿಂದ ಗಿಟಾರ್ ನಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಿತು.
 
 
 
 
 
 
 
 
 
 
 

Leave a Reply