ನೃತ್ಯನಿಕೇತನ ಕೊಡವೂರು ಸಂಸ್ಥೆಯ ವತಿಯಿಂದ ಹಮ್ಮಿಕೊಂಡ ನೂತನ ನೃತ್ಯಸರಣಿ “ನೃತ್ಯಚಾವಡಿ” ಇದರ ಉದ್ಘಾಟನಾ ಕಾರ್ಯಕ್ರಮ ದಿನಾಂಕ 26-03-2021 ಶುಕ್ರವಾರ ದಂದು ಮಣಿಪಾಲದ ನಿರ್ಮಿತಿಕೇಂದ್ರದ ಸೋಪಾನ ವೇದಿಕೆಯಲ್ಲಿ ಸಂಜೆ 6-30ಕ್ಕೆ ನಡೆಯಲಿದೆ.
ಭರತನಾಟ್ಯದ ಏಕವ್ಯಕ್ತಿ ನೃತ್ಯಪ್ರದರ್ಶನಕ್ಕೆ ಇದು ವೇದಿಕೆಯಾಗಿದ್ದು ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿರುವ ಕರ್ನಾಟಕ ಕಲಾಶ್ರೀ ವಿದುಷಿ ಶ್ರೀಮತಿ ಶಾರದಾಮಣಿಶೇಖರ್ ನೆರವೇರಿಸಲಿದ್ದಾರೆ.
ಸರಣಿ ಒಂದರ ನೃತ್ಯಪ್ರದರ್ಶನವನ್ನು ನೃತ್ಯನಿಕೇತನ ಕೊಡವೂರಿನ ಶಿಷ್ಯೆಯಾಗಿರುವ ವಿದುಷಿ ಚೈತ್ರ ಆಚಾರ್ಯ ಮಾಡಲಿದ್ದಾರೆಂದು ವಿದ್ವಾನ್ ಸುಧೀರ್ ಕೊಡವೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.