ಪೊಲೀಸ್ ಹೆಡ್ ಕಾನ್ಸ್ಸ್ಟೇಬಲ್ ಸಂತೋಷ್ ಶೆಟ್ಟಿಗೆ ಪಿ.ಹೆಚ್.ಡಿ

ಕರಾವಳಿ ಕಾವಲು ಪೊಲೀಸ್ ಮಲ್ಪೆ ಕೇಂದ್ರ ಕಚೇರಿಯಲ್ಲಿ , ಪೊಲೀಸ್ ಹೆಡ್ ಕಾನ್ಸ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಸಂತೋಷ್ ಶೆಟ್ಟಿ ಅವರಿಗೆ ಮೈಸೂರಿನ ಪ್ರತಿಷ್ಠಿತ ಕರ್ನಾಟಕ ಮುಕ್ತ ವಿಶ್ವ ವಿದ್ಯಾಲಯ ಪಿ.ಹೆಚ್ ಡಿ ಪದವಿಯನ್ನು ನೀಡಿದೆ.

ಇವರು ಕರ್ನಾಟಕ ಮುಕ್ತ ವಿವಿಯ ಪ್ರೊಪೆಸರ್ ಡಾ.ಮಹಾದೇವಿ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ “ಮೈಸೂರು ಒಡೆಯರ ಕಾಲದಲ್ಲಿ ಪೊಲೀಸ್ ವ್ಯವಸ್ಥೆ ಒಂದು ಅಧ್ಯಯನ” ವಿಷಯದ ಕುರಿತ ಮಹಾ ಪ್ರಬಂದಕ್ಕೆ ಪಿ.ಹೆಚ್ ಡಿ ಪದವಿಯನ್ನು ನೀಡಲಾಗಿದೆ.

ಇವರು ಬ್ರಹ್ಮಾವರ ಸಾಲಿಕೇರಿಯ ರಾಜೀವಿ ಶೆಡ್ತಿ ರವರ ಪುತ್ರ ಮತ್ತು ಹಾರಾಡಿ ವಿದ್ಯಾಮಂದಿರ ಶಾಲೆಯ ಹಳೆ ವಿದ್ಯಾರ್ಥಿಯಾಗಿರುತ್ತಾರೆ.

 
 
 
 
 
 
 
 
 
 
 

Leave a Reply