ಉಡುಪಿ ಪುತ್ತೂರು ವಿದ್ಯಾನಿಧಿ ಸಮಿತಿಯು ತನ್ನ ವಿದ್ಯಾದೇಗುಲದಲ್ಲಿ ಸ್ಥಾಪಿಸಿದ ಪೇಜಾವರ ಶ್ರೀ ಶ್ರೀ ವಿಶ್ವೇಶತೀರ್ಥ ದತ್ತಿನಿದಿಯಿಂದ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ 7 ವಟುಗಳಿಗೆ ಸಾಮೂಹಿಕ ಉಚಿತ ಬ್ರಹ್ಮೋಪದೇಶ ನಡೆಸಲಾಯಿತು.
ಈ ಸಂದರ್ಭದಲ್ಲಿ ಪೇಜಾವರ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಆಗಮಿಸಿ, ತ್ರೀಕಾಲ ಗಳಲ್ಲಿ ಸಂಧ್ಯಾವಂದನೆ ಮಾಡಿ ಜೀವನ ಸಾರ್ಥಕ್ಯವನ್ನು ಕಂಡು ಕೊಳ್ಳಬೇಕು. ವಿದ್ಯಾ ದೇಗುಲ ಸಮಿತಿಯು ಗುರುಗಳ ಹೆಸರಿನಲ್ಲಿ ದತ್ತಿನಿಧಿ ಸ್ಥಾಪಿಸಿ ಆಯೋಜಿಸಿರುವ ಸಾಮೂಹಿಕ ಉಚಿತ ಬ್ರಹ್ಮೋಪದೇಶ ಶ್ಲಾಘನೀಯ ಎಂದರು.
ಸುಬ್ರಹ್ಮಣ್ಯ ಜೋಶಿ ಸ್ವಾಮೀಜಿಯವರನ್ನು ಸ್ವಾಗತಿಸಿದರು. ಕಾರ್ಯಕಾರಿ ಸದಸ್ಯರೊಂದಿಗೆ ಅಧ್ಯಕ್ಷ ಚಂದ್ರಶೇಖರ ಅಡಿಗ ಸ್ವಾಮೀಜಿಗಳಿಗೆ ಗೌರವಾರ್ಪಣೆ ಸಲ್ಲಿಸಿದರು. ಸ್ಥಾಪಕ ಅಧ್ಯಕ್ಷ ಕೆ.ಮಾಧವ ಉಪಾಧ್ಯ ಕಾರ್ಯಕ್ರಮ ನಿರ್ವಹಿಸಿದರು.