ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿ ವತಿಯಿಂದ ಸ್ವಾತಂತ್ರ ದಿನಾಚರಣೆಯ ಪ್ರಯುಕ್ತ ಭಾಷಣ ಸ್ಪರ್ಧೆ.

ದಿನಾಂಕ 15-08-2021, ಭಾನುವಾರ ಸ್ವಾತಂತ್ರ ದಿನಾಚರಣೆಯ ಅಂಗವಾಗಿ ವೀರ ಪುರುಷರ ಜೀವನ ಚರಿತ್ರೆಯನ್ನು ಓದಿ ಅಧ್ಯಯನ ಮಾಡಿಕೊಳ್ಳ ಬೇಕು ಎಂಬ ಉದ್ದೇಶದಿಂದ ಹಾಗು ನಾವು ಅದೇ ದಾರಿಯಲ್ಲಿ ನಡೆಯಬೇಕು ಎಂದು ಉಡುಪಿ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆ ಆಯೋಜಿಸಲಾಗದೆ.
ಕಿರಿಯರು ವಿಭಾಗದಲ್ಲಿ 8/ 9/ 10 ನೆಯ ತರಗತಿ ವಿದ್ಯಾರ್ಥಿಗಳಿಗೆ ಕಿತ್ತೂರು ರಾಣಿ ಚೆನ್ನಮ್ಮ, ಚಂದ್ರಶೇಕರ್ ಅಜಾದ್ ಮತ್ತು ಹಿರಿಯರ ವಿಭಾಗದಲ್ಲಿ ವೀರ ಸಾವರ್ಕರ್ ಮತ್ತು ಡಾ. ಹೆಡ್ಗೆವಾರ್ ರವರ ಬಗ್ಗೆ  3 ರಿಂದ 4 ನಿಮಿಷ ಮೀರದಂತೆ,  ಕೊಡವೂರು ವಿಪ್ರಶ್ರೀ ಸಭಾಭವನದಲ್ಲಿ ಬೆಳಿಗ್ಗೆ 11 ಗಂಟೆಯಿಂದ ಭಾಷಣ ಸ್ಪರ್ಧೆ ಆಯೋಜಿಸಲಾಗಿದೆ. 
ನಗರಸಭಾ ಸದಸ್ಯ ಕೆ ವಿಜಯ ಕೊಡವೂರು ಹಾಗು ಪ್ರಭಾತ್ ಕೊಡವೂರು ನೇತೃತ್ವದಲ್ಲಿ ಕಿರಿಯರ ವಿಭಾಗದಲ್ಲಿ ಬಹುಮಾನವಾಗಿ ರು: 3,000-00, ರು: 1,000-00 ಹಾಗು  ಹಿರಿಯರ ವಿಭಾಗದಲ್ಲಿ ರು:4,000-00 ರು:2,000-00 ನೀಡಲಾಗುವುದು. 
ಆಧಾರ್ ಕಾರ್ಡ್ ಅಥವಾ ಸ್ಟೂಡೆಂಟ್ ಐಡಿಯೊಂದಿಗೆ ಮೊದಲು ಕರೆ ಮಾಡಿದ 50 ಜನರಿಗೆ ಮೊದಲ ಆದ್ಯತೆ ಎಂದು  ಕಾರ್ಯಕ್ರಮ ಸಂಚಾಲಕರಾದ  ಶೆಟ್ಟಿಗಾರ್ ಹಾಗು ಉಮೇಶ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.  
 
 
 
 
 
 
 
 
 
 
 

Leave a Reply