ಆಗಸ್ಟ್15ರಂದು ಸ್ವಾತಂತ್ರ್ಯೋತ್ಸವ ತಾಳಮದ್ದಳೆ

ಉಡುಪಿ: ಯಕ್ಷಕಲಾರಾಧಕ ಸುಧಾಕರ ಆಚಾರ್ಯ ಅವರು ಪ್ರತಿವರ್ಷ ಸ್ವಾತಂತ್ರ್ಯೋತ್ಸವ ದಿನದಂದು ಆಯೋಜಿಸುತ್ತ ಬಂದಿರುವ 31ನೇ ವರ್ಷದ ಸ್ವಾತಂತ್ರ್ಯೋತ್ಸವ ತಾಳಮದ್ದಳೆ ಈ ಬಾರಿ ಆ. 15ರಂದು ಇಲ್ಲಿನ ಬನ್ನಂಜೆ ಬಿಲ್ಲವರ ಸೇವಾಸಂಘದ ಶ್ರೀ ಶಿವಗಿರಿ ಸಭಾಗೃಹದಲ್ಲಿ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಬೆಳಿಗ್ಗೆ 9.30ರಿಂದ ಅಪರಾಹ್ನ 2ರ ವರೆಗೆ ನಡೆಯಲಿದೆ.

ಹೊಸ್ತೋಟ ಮಂಜುನಾಥ ಭಾಗವತ ವಿರಚಿತ ಲೋಕಾಭಿರಾಮ ಪ್ರಸ್ತುತಗೊಳ್ಳಲಿದೆ. ಹಿಮ್ಮೇಳ ದಲ್ಲಿ ಭಾಗವತರಾಗಿ ನಿರಂತರ 22ನೇ ಬಾರಿ ಆಗಮಿಸುತ್ತಿರುವ ಎಂ. ದಿನೇಶ ಅಮ್ಮಣ್ಣಾಯ ಮತ್ತು ಯಕ್ಷಧ್ರುವ ಪಟ್ಲ ಪಸತೀಶ್ ಶೆಟ್ಟಿ ಭಾಗವಹಿಸುವರು. ಚಂಡೆ ಮದ್ದಳೆಯಲ್ಲಿ ದೇಲಂತ ಮಜಲು ಸುಬ್ರಹ್ಮಣ್ಯ ಭಟ್, ಲವಕುಮಾರ್ ಐಲ ಮತ್ತು ಅರವಿಂದ ನೆರವಾಗುವರು.

ಅರ್ಥದಾರಿಗಳಾಗಿ ಪ್ರೊ. ಎಂ. ಎಲ್. ಸಾಮಗ, ಸುಣ್ಣಂಬಳ ವಿಶ್ವೇಶ್ವರ ಭಟ್, ವಾಸುದೇವ ರಂಗಭಟ್, ಗಣೇಶ ಶೆಟ್ಟಿ ಕನ್ನಡಿಕಟ್ಟೆ ಮತ್ತು ಸುಜಯೀಂದ್ರ ಹಂದೆ ಭಾಗವಹಿಸುವರು. ಕೋವಿಡ್ ಹಿನ್ನೆಲೆಯಲ್ಲಿ ಸೀಮಿತ ಆಸನ ವ್ಯವಸ್ಥೆ ಮಾಡಲಾಗಿದ್ದು, ಕೊರೊನಾ ನಿಯಮಾವಳಿ ಪಾಲಿಸ ಲಾಗುವುದು. ಕಾರ್ಯಕ್ರಮ ಸಾಮಾಜಿಕ ಜಾಲತಾಣ ಯೂಟ್ಯೂಬ್ ನಲ್ಲಿ ಪ್ರಸಾರಗೊಳ್ಳಲಿದೆ ಎಂದು ಸಂಘಟಕ ಸುಧಾಕರ ಆಚಾರ್ಯ ತಿಳಿಸಿದ್ದಾರೆ. 

 
 
 
 
 
 
 
 
 
 
 

Leave a Reply