ಖ್ಯಾತ ಸಂಗೀತ ಕಲಾವಿದೆ ಪರ್ಕಳ ದೀಪಿಕಾ ಆಚಾರ್ಯರವನ್ನು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಉಡುಪಿ ಜಿಲ್ಲೆಯ ವತಿಯಿಂದ ಅಭಿನಂದಿಸಿ ಗೌರವಿಸಿಲಾಯಿತು.
ಇನ್ನಷ್ಟೇ ಬಿಡುಗಡೆಯಾಗ ಬೇಕಾಗಿರುವ ಸಂಗೊಳ್ಳಿ ರಾಯಣ್ಣ ಬಗ್ಗೆ ತನ್ನ ಕಂಚಿನ ಕಂಠದಿಂದ ಸುಶ್ರಾವ್ಯವಾಗಿ ಹಾಡಿರುವ ದೀಪಿಕಾ ಆಚಾರ್ಯರವನ್ನು ಅವರ ಹುಟ್ಟುಹಬ್ಬದ ವಿಶೇಷ ಸಂದರ್ಭದಲ್ಲಿ ಬಳಗದ ಆಡಳಿತ ಕಚೇರಿಯಲ್ಲಿ ಸನ್ಮಾನಿಸಯಿತು.
ಜಿಲ್ಲಾಧ್ಯಕ್ಷ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ಸ್ವಾಗತಿಸಿ, ಪ್ರಸ್ತಾಪಿಸಿದರು. ಈ ಸಂದರ್ಭ ದಲ್ಲಿ ಜನಾರ್ಧನ್ ಕೊಡವೂರು, ಪೂರ್ಣಿಮಾ ಜನಾರ್ಧನ್, ರಂಜಿತ್ ಕೊಡವೂರು, ದೀಪಿಕಾ ಗಣೇಶ್, ಗಣೇಶ್ ಆಚಾರ್ಯ, ಕೃತಿಕಾ ಈರಪ್ಪ, ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ, ಲಕ್ಷ್ಮಣ್ ಕೋಲ್ಕಾರ್,ಸವಿತಾ ನೋಟಗಾರ್, ಈರಪ್ಪ ಗೌಂಡಿ, ಬಸವರಾಜ್ ಐಹೊಳೆ, ಪಂಪೇಶ, ಮಹೇಶ್ ಗುಂಡಿಬೈಲ್, ಶರಣಪ್ಪ ಬಾರ್ಕೆರ್, ಬಾಬು ತೆಲಗಿ ಉಪಸ್ಥಿತರಿದ್ದರು