ಉಡುಪಿ ಜಿಲ್ಲಾ ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಗಣೇಶ್ ಗಂಗೊಳ್ಳಿ ಇವರಿಗೆ ಕರುನಾಡ ಸೇವಾ ರತ್ನ ವಾರ್ಷಿಕ ರಾಜ್ಯ ಪ್ರಶಸ್ತಿ ಪ್ರಧಾನ 

ಮೈಸೂರು ಕಲಾ ಮಂದಿರದ ಮನೆಯಂಗಳ ಸಭಾಭವನದಲ್ಲಿ ಮಂಡ್ಯ ಜಿಲ್ಲೆಯ ಕರುನಾಡ ಸೇವಾ ಟ್ರಸ್ಟ್ ಕೊಡಮಾಡುವ ಕರುನಾಡ ಸೇವ ರತ್ನ ವಾರ್ಷಿಕ ರಾಜ್ಯ ಪ್ರಶಸ್ತಿಯನ್ನು ಖ್ಯಾತ ಜಾನಪದ ಹಾಡುಗಾರ ಉಡುಪಿ ಜಿಲ್ಲಾ ಕನ್ನಡ ಜಾನಪದ ಪರಿಷತ್ ಇದರ ಜಿಲ್ಲಾಧ್ಯಕ್ಷ ಗಣೇಶ್ ಗಂಗೊಳ್ಳಿ ಇವರಿಗೆ ಮೈಸೂರಿನ ಪ್ರಸಿದ್ದ ಸಾಹಿತಿಗಳಾದ ಶ್ರೀ ಜಯಪ್ಪ ಹೊನ್ನಾಳಿ ಪ್ರಧಾನ ಮಾಡಿದರು
ಈ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ಮಾ.ಚಿ.ಕೃಷ್ಣಪ್ಪ ಹಾಗೂ ಡಾ.ರೇಣುಕಾ ಪ್ರಸಾದ್ ಮೈಸೂರು. ಎಂ ಚಂದ್ರಶೇಖರ್ ಇವರು ಉಪಸ್ಥಿತರಿದ್ದರು. ಕರುನಾಡ ಸೇವಾ ಟ್ರಸ್ಟ್ ಮಂಡ್ಯ ಇದರ ಅಧ್ಯಕ್ಷ ಅಭಿನಂದನ್ ಎಂ. ಕಾರ್ಯಕ್ರಮ ಸಂಯೋಜನೆ ಮಾಡಿದ್ದರು 
 
 
 
 
 
 
 
 
 
 
 

Leave a Reply