ಧರ್ಮಸ್ಥಳ ಲಕ್ಷದೀಪೋತ್ಸವದಲ್ಲಿ ನೃತ್ಯನಿಕೇತನ ಕೊಡವೂರು ಕಲಾವಿದರು ಪ್ರಸ್ತುತ ಪಡಿಸುತ್ತಿರುವ ನೃತ್ಯ ರೂಪಕ ನಾರಸಿಂಹ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು. ಸ್ವತಃ ಡಾ . ವೀರೇಂದ್ರ ಹೆಗ್ಡೆಯವರು ತಮ್ಮ ಪರಿವಾರದೊಂದಿಗೆ ಕುಳಿತು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಅಮೃತ ವರ್ಷಿಣಿ ಕಲಾಭವನದಲ್ಲಿ ಕಿಕ್ಕಿರಿದು ಸೇರಿದ ಪ್ರೇಕ್ಷಕ ವರ್ಗ ಈ ಕಲಾವಿದರ ಅಭಿನಯವನ್ನು ನೋಡಿ ಆನಂದಿಸಿದರು. ಹಿಮ್ಮೇಳ ಕಲಾವಿದರು: ಸಂಗೀತ, ಮತ್ತು ನಿರ್ದೇಶನ ಡಾ|| ಶ್ರೀಪಾದ ಭಟ್, ಸಾಹಿತ್ಯ ಶ್ರೀಮತಿ ಸುಧಾ ಆಡುಕಳ, ವಾದ್ಯ ಸಂಗೀತ ಸಂಯೋಜನೆ ಮುರಳೀಧರ ಕೆ ಉಡುಪಿ, ನೃತ್ಯ ನಿರ್ದೇಶನ ವಿದ್ವಾನ್ ಸುಧೀರ್, ವಿದುಷಿ ಮಾನಸಿಸುಧೀರ್ ಮತ್ತು ವಿದುಷಿ ಅನಘಶ್ರೀ ರಂಗವಿನ್ಯಾಸ ರಾಜುಮಣಿಪಾಲ, ಗೋಪಿನಾಥ್ ಸಾಗರ, ಮತ್ತು ಪ್ರಶಾಂತ್ ಉದ್ಯಾವರ, ವರ್ಣಾಲಂಕಾರ ಪ್ರಕಾಶ್ ಕುಂಜಿಬೆಟ್ಟು, ಹರೀಶ್.