ಕೊಡವೂರು ದೇವಳದ ಗದ್ದೆಯಲ್ಲಿ ಉಳುಮೆ

ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಅಕ್ಟೊಬರ್ ೭,ಗುರುವಾರದಂದು ಕದಿರು ಕಟ್ಟುವ ಕಾರ್ಯಕ್ರಮ. ಕದಿರು ಪ್ರಸಾದ ಸ್ವೀಕರಿಸಲು ಬರುವ ಭಕ್ತಾಧಿಗಳಿಗೆ ಅವರವರ ಮನೆ ಯಲ್ಲಿ ಕಟ್ಟಲು ಬೇಕಾದಷ್ಟು ಕದಿರನ್ನು ನೀಡುವ ಸಲುವಾಗಿ ದೇವಳದ ಗದ್ದೆಯಲ್ಲಿ ಉಳುಮೆ ಮಾಡಿ  ನೇಜಿ ನೆಡಲಾಯಿತು.
ಈ ಸಂದರ್ಭದಲ್ಲಿ ಶ್ರೀ ಶಂಕರನಾರಾಯಣ ಭಕ್ತವೃಂದ ಅಧ್ಯಕ್ಷ ಸಾಧು ಸಾಲಿಯಾನ್, ಕಾರ್ಯ ದರ್ಶಿ ಪ್ರಕಾಶ್ ಜಿ ಕೊಡವೂರ್, ಗೌರವಾಧ್ಯಕ್ಷ ರವಿರಾಜ್  ಹೆಗ್ಡೆ, ಸದಸ್ಯರಾದ ಜನಾರ್ದನ್  ಕೊಡವೂರ್, ರಾಜ ಎ ಶೇರಿಗಾರ್,  ಕೋಶಾಧಿಕಾರಿ ರಾಮ ಶೇರಿಗಾರ್ ಹಾಗು  ದೇವಳದ ಪರಿಸರದ ಮಹಿಳೆಯರಾದ ಪಾರ್ವತಿ ಪೂಜಾರ್ತಿ, ಕಲ್ಯಾಣಿ ಪೂಜಾರ್ತಿ, ಶಕುಂತಲ ಮಡಿವಾಳ್ತಿ, ಸರೋಜಿನಿ ಮತ್ತು ಲಲಿತ ಸಹಕರಿಸಿದರು.     
 
 
 
 
 
 
 
 
 
 
 

Leave a Reply