ಅಮೆರಿಕಾದ ಅಟ್ಲಾಂಟಾ ಮಹಾನಗರದಲ್ಲಿ ವೈಭವದ ಶ್ರೀನಿವಾಸ ಕಲ್ಯಾಣ ಸಂಪನ್ನ

ಪರಮಪೂಜ್ಯ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಆದೇಶ ಮತ್ತು ಆಶೀರ್ವಾದದೊಂದಿಗೆ ಅಮೆರಿಕಾದ ಅಟ್ಲಾಂಟಾ ಮಹಾನಗರದಲ್ಲಿರುವ ಶ್ರೀ ಪುತ್ತಿಗೆ ಮಠದಲ್ಲಿ ಲೋಕ ಕಲ್ಯಾಣಕ್ಕಾಗಿ 

ಶ್ರೀನಿವಾಸ ಕಲ್ಯಾಣ ಮಹೋತ್ಸವ ಅತ್ಯಂತ ವೈಭವದಿಂದ ಇಂದು ಸಂಪನ್ನ ಗೊಂಡಿತು.

ಶ್ರೀ ಪುತ್ತಿಗೆಮಠದ ಅನಿವಾಸಿ ಶಾಖೆಗಳ ಮುಖ್ಯ ಕಾರ್ಯದರ್ಶಿ ಶ್ರೀ ಪ್ರಸನ್ನಾಚಾರ್ಯ ಇವರು 29 ರ ಶುಕ್ರವಾರದಂದು ದೀಪ ಪ್ರಜ್ವಾಲನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

30/3/2024 ರ ಶನಿವಾರದಂದು ಶ್ರೀನಿವಾಸ ಕಲ್ಯಾಣ ಮಹೋತ್ಸವವು ನೃತ್ಯ ಗೀತ ವಾದ್ಯಗಳೊಂದಿಗೆ ನೂರಾರು ಭಕ್ತಜನರ ಸಂಭ್ರಮದ ಪಾಲ್ಗೊಳ್ಳುವಿಕೆಯೊಂದಿಗೆ ಅತ್ಯಂತ ವೈಭವದೊಂದೊಂದಿಗೆ ಜರಗಿತು.

ಪೂಜ್ಯ ಪುತ್ತಿಗೆ ಶ್ರೀಪಾದರು ವೀಡಿಯೋ ಸಂದೇಶದ ಮೂಲಕ ಭಕ್ತಜನರನ್ನು ಹರಸಿದರು.

ಫಿನಿಕ್ಸ್ ಮಹಾನಗರದಲ್ಲಿರುವ ಶ್ರೀಪುತ್ತಿಗೆ ಮಠದ ಪ್ರಧಾನ ಅರ್ಚಕರಾದ ಶ್ರೀ ಕಿರಣ್ ಕುಮಾರ್ ರವರು ಹುಸ್ಟೋನ್ ಮಹಾನಗರದಲ್ಲಿರುವ ಶ್ರೀ ಪುತ್ತಿಗೆ ಮಠದ ಪ್ರಧಾನ ಅರ್ಚಕರಾದ ಶ್ರೀ ರಘುರಾಮ್ ಭಟ್ ರವರ ಸಹಯೋಗದೊಂದಿಗೆ ಕಲ್ಯಾಣ ಮಹೋತ್ಸವದ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.

ಅಟ್ಲಾಂಟಾ ಮಹಾನಗರದ ಲ್ಲಿರುವ ಶ್ರೀ ಪುತ್ತಿಗೆ ಮಠದ ಪ್ರಧಾನ ಅರ್ಚಕರಾದ ಶ್ರೀ ಜಯಪ್ರಸಾದ ಅಮ್ಮಣ್ಣಾಯರವರು ನೂರಾರು ಕಾರ್ಯಕರ್ತರ ಸಹಕಾರದೊಂದಿಗೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಸಂಯೋಜಿಸಿದ್ದರು.

ನೂತನ ವಾಗಿ ನಿರ್ಮಾಣ ಗೊಳ್ಳಲಿರುವ ಅತ್ಯಪೂರ್ವ ದೇಗುಲದ ನೀಲನಕ್ಷೆಯನ್ನು ಶ್ರೀ ಬಾಲಕೃಷ್ಣ ಇವರು ಸಭೆಗೆ ವಿವರಿಸಿ ಎಲ್ಲರ ಭಕ್ತ ಜನರ ಸಹಕಾರವನ್ನು ಶ್ರೀ ಮಠದ ಪರವಾಗಿ ಕೋರಿದರು.

ಕಾರ್ಯಕ್ರಮದಲ್ಲಿ ಸಿಟಿ ಕೋನ್ಸಿಲರ್ ಶ್ರೀ ಬಾಬ್ ಎರಾಮಿಲ್,ಖ್ಯಾತ ವಕೀಲ ಶ್ರೀ ರೂಪಾಲ್ ವೈಷ್ಣವ್ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ವಿಶೇಷ ಮೆರಗನ್ನು ನೀಡಿದರು.

ಶ್ರೀಶ್ರೀನಿವಾಸನ ಕಲ್ಯಾಣಮಹೋತ್ಸವಕ್ಕೆಂದೇ ಶ್ರೀ ಹರೀಶ ಭಟ್ ತಂಡದವರು ಸಿದ್ದಪಡಿಸಿದ್ದ , ಭಗವದರ್ಪಿತವಾದ ವಿವಿಧ ಭಕ್ಷ್ಯ ಭೋಜ್ಯ್ಯಗಳೊಂದಿಗೆ ಸಂಯೋಜಿತವಾದ ಉಡುಪಿ ಊಟವನ್ನು ಸಾವಿರಾರು ಮಂದಿ ಭಕ್ತಿಯಿಂದ ಸವಿದರು.

ಪೂಜ್ಯ ಪುತ್ತಿಗೆ ಶ್ರೀಪಾದರು ಸ್ಥಾಪಿಸಿರುವ ಶ್ರೀಕೃಷ್ಣ ಮಂದಿರಗಳಲ್ಲಿ ಇದು ಆರನೆಯ ಮಂದಿರವಾಗಿರುವುದು.

ಭಕ್ತ ಜನರ ಸಹಕಾರದೊಂದಿಗೆ ಖರೀದಿಸಲ್ಪಟ್ಟ , 6 ಎಕರೆ ವಿಸ್ತೀರ್ಣ ಜಾಗದಲ್ಲಿ ನೂತನ ಮಂದಿರ ನಿರ್ಮಾಣವಾಗಲಿದ್ದು , ಈ ಬಗ್ಗೆ ಪರ್ಯಾಯ ಪೂರ್ವದಲ್ಲಿಯೇ ಪೂಜ್ಯ ಶ್ರೀಪಾದರು ಭೂಮಿ ಪೂಜೆಯನ್ನು ನೆರವೇರಿಸಿದ್ದನ್ನು ನೆನಪಿಸಿಕೊಳ್ಳಬಹುದಾಗಿದೆ.

 
 
 
 
 
 
 
 
 
 
 

Leave a Reply