ಉಡುಪಿ : ಸಂಗೀತ ಕಲೆಯು ಮನುಷ್ಯನ ಎಲ್ಲಾ ದುಃಖ ಗಳನ್ನು ದೊರ ಮಾಡುವ ಶಕ್ತಿ ಹೊಂದಿದೆ. ಸಂಗೀತ ಅಭ್ಯಾಸ ದಿಂದ ಅರೋಗ್ಯ ವೃದ್ಧಿ ,ನೆಮ್ಮದಿ ದೊರೆಯುತ್ತದೆ. ಕಲೆಗಾರ ಬದುಕಿದರೇ ಕಲೆ ಉಳಿಯುತ್ತದೆ ,ಯುವ , ಬಾಲ ಪ್ರತಿಭೆಗಳಿಗೆ ಈ ಸಂಸ್ಥೆ ಆಸರೆಯಾಗಲಿ ಎಂದು ಉಡುಪಿ ಕಡಿಯಾಳಿಯಲ್ಲಿ ನೂತನವಾಗಿ ಆರಂಭಗೊಂಡ ಹವಾನಿಯಂತ್ರಿತ “ಸ್ಟಾರ್ ಮ್ಯೂಸಿಕ್ ಕೋಸ್ಟಲ್ ಸ್ಟುಡಿಯೋ ” ದೀಪ ಬೆಳಗಿಸಿ ಉದ್ಘಾಟಿಸಿ ಕುಂದಾಪುರ ಕಲಾಕ್ಷೇತ್ರದ ಕಿಶೋರ್ ಕುಮಾರ್ ಮಾತನಾಡಿ ಶುಭ ಹಾರೈಸಿದರು.
ಸಂಗೀತ ವಿದ್ವಾನ್ ಗುರುದಾಸ್ ಶೆಣೈ ಮಾತನಾಡಿ ಇಲ್ಲಿ ಕಲಿಸುವ ಹಿಂದೂಸ್ತಾನಿ, ಕರ್ನಾಟಕ, ಕ್ಲಾಸಿಕ್ಲ ಸಂಗೀತದ ಕಲೆಯ ಬೆಳವಣಿಗೆ ಆಧುನಿಕ ಶೈಲಿಯ ಸ್ಟುಡಿಯೋ ಅಗತ್ಯ ಹಾಗೂ ಮಹತ್ವ ತಿಳಿಸಿದರು. ಖ್ಯಾತ ಗಾಯಕರಾದ ರವೀಂದ್ರ ಪ್ರಭು ಮಾತನಾಡಿ ಇಲ್ಲಿನ ಕಲಾವಿದರು ಸ್ಥಳೀಯ ಆರ್ಕೆಸ್ಟ್ರಾ ಗಳಲ್ಲಿ ಹಾಡಿ ಉತ್ತಮ ಹೆಸರು ಹೊಂದಿದ್ದಾರೆ. ನೂರಾರು ಯುವ ಪ್ರತಿಭೆಗಳು ಈ ಸಂಸ್ಥೆಯ ಮುಖಾಂತರ ಬೆಳೆದು ನಾಡಿಗೆ ಕೀರ್ತಿ ತರಲಿ ಶುಭ ಹಾರೈಸಿದರು.
ಸ್ಥಾಪಕರಾದ ಪ್ರಕಾಶ್ ಕಾಮತ್ ಮಾತನಾಡುತ್ತಾ “ಕೋಸ್ಟಲ್ ಸ್ಟಾರ್ ಮ್ಯೂಸಿಕ್ ಕ್ಲಬ್” ಮಣಿಪಾಲ ಹತ್ತಾರು ಸಮಾನ ಮನಸ್ಕರ ಸಹಕಾರದಲ್ಲಿ ಕಲೆಗೆ ಪ್ರೋತ್ಸವ, ಯುವ ಪ್ರತಿಭೆಗಳಿಗೆ ತರಬೇತಿ ನೀಡುವ ಉದ್ದೇಶದಿಂದ “ಸ್ಟಾರ್ ಮ್ಯೂಸಿಕ್ ಕೋಸ್ಟಲ್ ಸ್ಟುಡಿಯೋ” ಸ್ಥಾಪನೆ ಮಾಡಿದ್ದೇವೆ. ಇದರಲ್ಲಿ ಮಕ್ಕಳಿಗೆ ತಬಲಾ, ಹಾರ್ಮೊನಿಯೋಮ್, ಗಿಟಾರ್, ಕೊಳಲು, ವಿವಿಧ ರೀತಿಯ ಸಂಗೀತ ತರಬೇತಿ ನೀಡಲಾಗುವುದು. ಪ್ರತಿ ವಾರ ಸಂಸ್ಥೆಯ ಸದಸ್ಯರಿಂದ ಸಂಗೀತ ಕಾರ್ಯಕ್ರಮ ನೆಡೆಯಲಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಟಿ ರಂಗ ಪೈ, ಶ್ರುತಿ ಶಣೈ, ಶಾಲಿನಿ ವಿಜೇಂದ್ರ, ಹಲವು ಗಣ್ಯರು ಉಪಸ್ಥರಿದ್ದರು. ಕಲಾವಿದ ಸತೀಶ್ಚಂದ್ರ ಸ್ವಾಗತಿಸಿದರು. ಅಮಿತಾಂಜಲಿ ಕಿರಣ್ ಕಾರ್ಯ ನಿರೂಪಣೆಗೈದರು. ಪ್ರಕಾಶ್ ಕಾಮತ್ ರವರು ವಂದನಾರ್ಪಣೆ ಸಲ್ಲಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ವಿದ್ವಾನ್ ಗುರುದಾಸ್ ಶೆಣೈ, ಹಿನ್ನೆಲೆ ಗಾಯಕ ರವೀಂದ್ರಪ್ರಭು, ದೇವಾನಂದ ಗಾಂವ್ಕರ್, ಶ್ರೀನಿವಾಸ ಭಾಗವತ್ ಮತ್ತು ರೋಹಿತ್ ಕಾಮತ್ ಇವರುಗಳು “ಭಜನಾಮೃತ” ನೇರವೇರಿತು. ಕೋರ್ ಕಮಿಟಿಯ ಸದಸ್ಯರು ಹಾಗೂ ಕ್ಲಬ್ ನ ಸದಸ್ಯರು ,ಸಂಗೀತ ಅಭಿಮಾನಿಗಳು ಉಪಸ್ಥರಿದ್ದರು.