ಪೂರ್ಣಪ್ರಜ್ಞ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ, ಯೂತ್ ರೆಡ್ಕ್ರಾಸ್ ಹಾಗೂ ರೆಡ್ ರಿಬ್ಬನ್ ಕ್ಲಬ್ ಜಂಟಿ ಆಶ್ರಯದಲ್ಲಿ HIV/AIDS ನ ಕುರಿತು ಜಾಗೃತಿ
ಕಾರ್ಯಕ್ರಮ ನಡೆಯಿತು.
ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ತಡೆಗಟ್ಟುವಿಕೆ ಘಟಕ, ಅಜ್ಜರಕಾಡು ಉಡುಪಿ ಇದರ ಜಿಲ್ಲಾ ಮೇಲ್ವಿಚಾರಕರಾದ ಶ್ರೀ ಮಹಾಬಲೇಶ್ವರ ಇವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಏಡ್ಸ್ ರೋಗದ ಇತಿಹಾಸ, ಏಚ್ಐವಿ ಹರಡುವ ಬಗ್ಗೆ ಅರಿವು ಹಾಗೂ
ತಡೆಗಟ್ಟಿನ ವಿಧಾನದ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಎನ್ಎಸ್ಎಸ್ ನ ಯೋಜನಾಧಿಕಾರಿಗಳಾದ ಸಂದೀಪ್ ಶೆಟ್ಟಿ, ಸುಪರ್ಣ, ಸಹಯೋಜನಾಧಿಕಾರಿಗಳಾದ ಡಾ|| ನಾಗರಾಜ ಜಿ., ಸ್ವಾತಿ ಹಾಗೂ ಯೂತ್ ರೆಡ್ಕ್ರಾಸ್ ನ ಯೋಜನಾಧಿಕಾರಿಗಳಾದ ಡಾ|| ರಂಗಸ್ವಾಮಿ ಜಿ, ಸಹಯೋಜನಾಧಿಕಾರಿಗಳಾದ ಅನುಷಾ ಉಪಸ್ಥಿತರಿದ್ದರು.
ಸಚಿನ್ ಸ್ವಾಗತಿಸಿ, ಸುರಕ್ಷಾ ವಂದಿಸಿ, ಮೇಘನಾ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು.