ಶ್ರೀ ಶಿರೂರು ಮೂಲ ಮಠ ದಲ್ಲಿ ಶ್ರೀ ರಾಮ ನವಮಿ ಮಹೋತ್ಸವ ಆಚರಣೆ ಬಗ್ಗೆ ಪೂರ್ವ ಭಾವಿ ಸಭೆ

ತಾ 9.4.24 ರಿಂದ 18.4.24 ರವರೆಗೆ ಶ್ರೀ ಶ್ರೀ ವೇದ ವರ್ಧನ ತೀರ್ಥ ಶ್ರೀ ಪಾದಂಗಳವರ ನೇತೃತ್ವದಲ್ಲಿ ಶ್ರೀ ಶಿರೂರಿನ ಮೂಲ ಮಠ ದಲ್ಲಿ ಶ್ರೀ ರಾಮ ನವಮಿ ಮಹೋತ್ಸವವು ವೈಭವದಿಂದ ಜರುಗಲಿದೆ. ತತ್ಸಬಂಧ ನಡೆಯಲಿರುವ ಕಾರ್ಯಕ್ರಮ ರೂಪು ರೇಖೆ ವ್ಯವಸ್ಥೆ ಬಗ್ಗೆ ಸಮಾಲೋಚನಾ ಸಭೆಯು ಶ್ರೀ ಮಠದ ದಿವಾನರಾದ ಶ್ರೀ ಉದಯ ಸರಳತ್ತಾಯ ಇವರ ಅಧ್ಯಕ್ಷತೆ ಯಲ್ಲಿ ಉಡುಪಿ ಶಿರೂರು ಮಠದಲ್ಲಿ ನಡೆದಿದ್ದು ಶ್ರೀ ಮಂಜುನಾಥ್ ಉಪಾಧ್ಯಅಧ್ಯಕ್ಷರು ತಾಲೂಕು ಬ್ರಾಹ್ಮಣ ಮಹಾ ಸಭಾ, ಶ್ರೀ ಸಂದೀಪ್ ಮಂಜ ಅಧ್ಯಕ್ಷರು ಜಿಲ್ಲಾ ಬ್ರಾಹ್ಮಣ ಮಹಾ ಸಭಾ, ಶ್ರೀ ಚಂದ್ರಕಾಂತ್ ಅಧ್ಯಕ್ಷರು ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ (ರಿ ), ಶ್ರೀ ರವಿಪ್ರಕಾಶ್ ಅಧ್ಯಕ್ಷರು ತುಳು ಶಿವಳ್ಳಿ ಮಾಧ್ವ ಮಂಡಲ,ಶ್ರೀ ಶ್ರೀಶ ಭಟ್ ಕಡೆಕಾರ್ ಶ್ರೀ ಮಠದ ಪಾರುಪತ್ಯೆಗಾರರು ಉಪಸ್ಥಿತರಿದ್ದು ಕಾರ್ಯಕ್ರಮ ದ ಯಶಸ್ಸಿಗೆ ಸೂಕ್ತ ಸಲಹೆ ಸೂಚನೆ ನೀಡಿದರು.
ಸಭೆಯಲ್ಲಿ ಶ್ರೀ ಶ್ರೀನಿವಾಸ್ ಬಾದ್ಯಾ, ಶ್ರೀ ಶ್ರೀನಿವಾಸ್ ಬಲ್ಲಾಳ್, ಶ್ರೀ ಜಯರಾಮ್ ಆಚಾರ್ಯ, ಶ್ರೀ ಶೋಭಾ ಉಪಾಧ್ಯಯ, ಶ್ರೀ ವಾಸುದೇವ ಆಚಾರ್ಯ ಹಾಗೂ ಎಲ್ಲಾ ವಲಯದ ಪದಾಧಿಕಾರಿಗಳು, ಹಿರಿಯರು, ಮಹಿಳೆಯರು ಸಲಹೆ ಸೂಚನೆ ನೀಡಿ ಸಂಕಲ್ಪ ಬದ್ಧರಾಗುವೆವೆಂದರು.ಶ್ರೀ ಮಠದ ದಿವಾನರು ಪ್ರಸ್ತಾವನೆ ಮಾತುಗಳನ್ನಾಡಿ,
ಶ್ರೀ ವಿಷ್ಣು ಪ್ರಸಾದ್ ಪಾಡಿಗಾರ್ ಸ್ವಾಗತಿಸಿ ಧನ್ಯವಾದ ನೀಡಿದರು.
 
 
 
 
 
 
 
 
 
 
 

Leave a Reply