ಶ್ರೀಪುತ್ತಿಗೆ ಶ್ರೀಪಾದರ ಮೇಲೆ ಅರಳು ರಾಶಿಯ ಮಳೆಯನ್ನೇ ಸುರಿಸಿದ ರಂಜನ್ ಕಲ್ಕೂರ

ಪರ್ಯಾಯ ಸ್ವಾಗತ ಸಮಿತಿಯ ಕೋಶಾಧಿಕಾರಿ ಶ್ರೀ ರಂಜನ್ ಕಲ್ಕೂರ ಅವರ ಕಲ್ಕೂರ ರೆಫ್ರಿಜರೇಷನ್ ಸಂಸ್ಥೆಗೆ  ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಭೇಟಿ ನೀಡಿದರು. ಶ್ರೀ ರಂಜನ್ ಕಲ್ಕೂರ ದಂಪತಿಗಳು ಶ್ರೀಪಾದರನ್ನು ಸ್ವಾಗತಿಸಿ ಗೌರವಿಸಿದರು.

ಕಲ್ಕೂರ ರೆಫ್ರಿಜರೇಷನ್ ನಲ್ಲಿ ಅಳವಡಿಸಲಾಗಿದ್ದ  ನೂತನ ಲೇಸರ್ ಕಟ್ಟಿಂಗ್ ಮೆಷಿನನ್ನು ವೀಕ್ಷಿಸಿದ ಶ್ರೀಪಾದರು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಜೆಸಿಬಿ ಮೂಲಕ ಅರಳು ರಾಶಿಯನ್ನೇ ಸ್ವಾಮಿಗಳ ಮೇಲೆ ಭಕ್ತಿ ಗೌರವದಿಂದ ಸುರಿಯಲಾಯಿತು. ಸ್ವಾಮಿಗಳು ಈ ದೃಶ್ಯ ಕಂಡು ಪುಳಕಿತರಾದರು.
 
 
 
 
 
 
 
 
 
 
 

Leave a Reply