ಕೊಡವೂರು ಶ್ರೀ ಶಂಕರನಾರಾಯಣ ದೇವಳದಲ್ಲಿ ವಾರ್ಷಿಕ ಮಹಾ ರಥೋತ್ಸವ

ಉಡುಪಿ: ಮಹಾತೋಬಾರ ಕೊಡವೂರು ಶ್ರೀ ಶಂಕರನಾರಾಯಣ ದೇವಳದಲ್ಲಿ ವಾರ್ಷಿಕ ಮಹಾ ರಥೋತ್ಸವ ವೇದಮೂರ್ತಿ ಪುತ್ತೂರು ಹಯವದನ ತಂತ್ರಿಗಳ ನೇತೃತ್ವದಲ್ಲಿ ಶನಿವಾರದಂದು ಬೆಳಿಗ್ಗೆ ಜರುಗಿತು. ಪಲ್ಲಪೂಜೆ, ಬಲಿ ಮುಂತಾದ ಧಾರ್ಮಿಕ ಪ್ರಕ್ರಿಯೆಗಳು ನಡೆದು ಬಳಿಕ ರಥ ಶುದ್ದಿ, ಪಿಲಾರು ಶ್ರೀಧರ ಉಡುಪ ರವರ ನರ್ತನ ಸೇವೆಯೊಂದಿಗೆ ರಥರೋಹಣದ ಬಳಿಕ ಮಹಾ ಅನ್ನ ಪ್ರಸಾದ ವಿನಿಯೋಗ ನಡೆಯಿತು.

ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪ್ರಕಾಶ್ ಜಿ ಕೊಡವೂರು, ಸದಸ್ಯರಾದ ಜನಾರ್ದನ್ ಕೊಡವೂರು, ಅಡಿಗ ಕೃಷ್ಣಮೂರ್ತಿ ಭಟ್, ರಾಜ ಎ ಶೇರಿಗಾರ್, ಭಾಸ್ಕರ ಬಾಚನಬೈಲು, ಸುಧಾ ಎನ್ ಶೆಟ್ಟಿ, ಬಾಬ ,ಸಾಧು ಸಾಲಿಯಾನ್, ರವಿರಾಜ್ ಹೆಗ್ಡೆ ,ಹೇಮಾವತಿ ಎಸ್ ,ಆನಂದ ಪಿ ಸುವರ್ಣ ಲಕ್ಷ್ಮೀ‌ನಾರಾಯಣ ಭಟ್ ,ಶ್ಯಾಮ ಸುಂದರ ಭಟ್,ಉಮೇಶ್ ರಾವ್,ಸಂಧ್ಯಾ ಪ್ರಕಾಶ್,ಪೂರ್ಣಿಮಾ‌ ಜನಾರ್ದನ್, ವಿಜಯಶ್ರೀ,ಹರಿಣಿ ಕೃಷ್ಣಮೂರ್ತಿ, ಸತೀಶ್ ಕೊಡವೂರ್, ಬಾಲಕೃಷ್ಣ, ಕಾಂತಪ್ಪ ಕರ್ಕೇರ, ಶಿವಪ್ಪ ಟಿ ಕಾಂಚನ್, ಹಿರಿಯಣ್ಣ, ಹರೀಶ್ ಕೋಟ್ಯಾನ್, ರಂಜಿತ್ ಕೊಡವೂರು ಅರುಣ್ ಕುಮಾರ್, ಪ್ರವೀಣ್ ಕೊಡವೂರ್ ಮತ್ತಿತರರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply