ಕದ್ರಂಜೆ ರುದ್ರಾಲಯದ ಅಷ್ಟಮಂಗಲಕ್ಕೆ ಭೇಟಿ, ರಾಮಮಂದಿರದ ಮೊದಲು ಶಿವಮಂದಿರ ನಿರ್ಮಾಣವಾಗಲಿ : ಪೇಜಾವರ ಶ್ರೀ

ರಾಮಮಂತ್ರಕ್ಕಿಂತ ಅನ್ಯ ತಾರಕ ಮಂತ್ರ ಇಲ್ಲ ಎಂದು ಸ್ವಯಂ ರುದ್ರದೇವರು ತನ್ನ ಸತಿ ಪಾರ್ವತಿಗೆ ಹೇಳಿದ್ದಾರೆ . ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುವ ಹೊತ್ತಲ್ಲಿ ಬಿಲ್ಲಾಡಿ ಯಲ್ಲಿ ಭೂಗತವಾಗಿರುವ ಶ್ರೀ ಮಹಾಲಿಂಗೇಶ್ವರ ಸನ್ನಿಧಿಯನ್ನು ಪುನರುತ್ಥಾನ ಗೊಳಿಸಲು ಗ್ರಾಮಸ್ಥರು ಸಂಕಲ್ಪವನ್ನು ಮಾಡಿರುವುದು ಅತ್ಯಂತ ಸಂದರ್ಭೋಚಿತವಾಗಿದೆ.

ಇಡೀ ಊರಿನ ಮಂದಿ ಒಂದೇ ಮನಸ್ಸಿನಿಂದ ದೃಢ ನಿಶ್ಚಯ ಮಾಡಿ ಈ ದೇಗುಲದ ಪುನರ್ ನಿರ್ಮಾಣಕ್ಕೆ ಕೈಜೋಡಿಸಬೇಕು ಅಯೋಧ್ಯೆಯ ರಾಮಮಂದಿರ ಎರಡು ವರ್ಷದಲ್ಲಿ ಪೂರ್ಣ ಗೊಳ್ಳುವ ವಿಶ್ವಾಸವಿದೆ . ಅದಕ್ಕೂ ಮೊದಲೇ ಕದ್ರಂಜೆಯ ಶಿವಮಂದಿರ ನಿರ್ಮಾಣವಾಗಲಿ ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀ ಪಾದರು ಶುಭ ಕೋರಿದ್ದಾರೆ .

ಕುಂದಾಪುರ ತಾಲೂಕು ಬಿಲ್ಲಾಡಿ ಗ್ರಾಮದ ಸಮೃದ್ಧ ವನಸಿರಿಯ ನಡುವೆ ದಶಕಗಳಿಂದ ಭೂಗತ ವಾಗಿರುವ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ನಿಮಿತ್ತ ಪ್ರಸಿದ್ಧ ಜ್ಯೋತಿಷಿ ಮಾಧವನ್ ಪೊದುವಾಳರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಅಷ್ಟಮಂಗಲ ಪ್ರಶ್ನ ಚಿಂತನೆಯ ಕಾರ್ಯಕ್ರಮಕ್ಕೆ ಗುರುವಾರ ಬೆಳಿಗ್ಗೆ ಭೇಟಿ ನೀಡಿ ಗುರುಪೂಜೆ ಸ್ವೀಕರಿಸಿ, ನವೀಕರಣ ಕಾರ್ಯಕ್ಕೆ ಮೂಲಧನವನ್ನು ನೀಡಿ ಉದ್ದೇಶಿತ ಕಾರ್ಯ ಯಶಸ್ವಿಯಾಗಿ ಸಮಸ್ತರಿಗೆ ರುದ್ರದೇವರ ಅನುಗ್ರಹ ದೊರೆಯಲಿ ಎಂದು ಆಶಿಸಿದರು . 

ಸ್ಥಳೀಯ ಮುಖಂಡರಾದ ಪೃಥ್ವಿರಾಜ್ ಶೆಟ್ಟಿ , ಭುಜಂಗ ಶೆಟ್ಟಿ , ಉಮೇಶ ಹೆಗ್ಡೆ , ಕೃಷ್ಣ ಭಟ್ , ವಾಸುದೇವ ಭಟ್ ಪೆರಂಪಳ್ಳಿ , ಕರುಣಾಕರ ಶೆಟ್ಟಿ ಸೇರಿದಂತೆ ನೂರಾರು ಮಂದಿ ಉಪಸ್ಥಿತ ರಿದ್ದರು . ಜ್ಯೋತಿಷಿ ಮಾಧವನ್ ಪೊದುವಾಳ್ ರನ್ನು ಶ್ರೀಗಳು ಶಾಲು ಹೊದೆಸಿ ಗೌರವಿಸಿದರು .

 
 
 
 
 
 
 
 
 
 
 

Leave a Reply