ʼಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್ ಆ್ಯಂಡ್ ಆರ್ಕಿಟೆಕ್ಟ್ಸ್ ಪದಗ್ರಹಣ

ಕುಂದಾಪುರ : ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್ ಆ್ಯಂಡ್ ಆರ್ಕಿಟೆಕ್ಟ್ಸ್(ರಿ) ಇದರ ಪದಗ್ರಹಣ ಸಮಾರಂಭವು ನಗು ಪ್ಯಾಲೇಸ್ ನಲ್ಲಿ ಶನಿವಾರ ನಡೆಯಿತು. ಮುಖ್ಯ ಅತಿಥಿ ಆರ್ಕಿಟೆಕ್ಟ್ ಯೋಗೀಶ್ ಚಂದ್ರಾಧರ್ ಉಡುಪಿ ಪದಗ್ರಹಣ ಅಧಿಕಾರಿಯಾಗಿ ಹಾಗೂ ಉದ್ಯಮಿ ರಾಜೇಂದ್ರ ಕಾಮತ್ ಅವರು ಅತಿಥಿಯಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇಂಜಿನಿಯರ್ ಮಂಜುನಾಥ್ ಎನ್, ಪ್ರವೀಣ ಎನ್, ಸತ್ಯಶಂಕರ್ ಕೆ. ಇವರು ನೂತನ ಅಧ್ಯಕ್ಷರಾದ ಆರ್ಕಿಟೆಕ್ಟ್ ಇಕ್ಬಾಲ್ ಪಿ. ಎಂ., ಕಾರ್ಯದರ್ಶಿ ಹರೀಶ್ ಕುಲಾಲ್, ಖಜಾಂಚಿ ವಿನೋದ್ ಬರೆಟ್ಟೊ ಇವರಿಗೆ ಅಧಿಕಾರವನ್ನು ಹಸ್ತಾಂತರಿಸಿದರು. ಗುರುರಾಜ್ ರಾವ್ ಹಾಗೂ ರವೀಂದ್ರ ಕೆ. ಕಾರ್ಯಕ್ರಮ ನಿರೂಪಿಸಿದರು.

ಸಮಾರಂಭವು ದಿನೇಶ್ ಹೆಗ್ಡೆ ಅವರ ಪ್ರಾರ್ಥನೆಯಿಂದ ಆರಂಭಿಸಲಾಯಿತು. ರಾಮಾನಂದ ಕೆ. ಸ್ವಾಗತ ಭಾಷಣ ಮಾಡಿದರು. ರವೀಂದ್ರ ಕಾವೇರಿ ಸಂಸ್ಥೆಯನ್ನು ಪರಿಚಯಿಸಿದರು. ರಾಮಚಂದ್ರ ಆಚಾರ್ ಹಾಗೂ ಓಂ ಪ್ರಕಾಶ್ ಅವರು ಅತಿಥಿಗಳನ್ನು ಪರಿಚಯಿಸಿದರು. ಹರೀಶ್ ಕುಲಾಲ್ ವಂದಿಸಿದರು.

 
 
 
 
 
 
 
 
 
 
 

Leave a Reply