ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಲಕ್ಷ್ಮೀನಗರ, ಬೆಳ್ಕಲೆಯಲ್ಲಿ ಮೇ 28, 2023ರಂದು ಮಧ್ಯಾಹ್ನ 2ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಯೋಗ ಪ್ರಾಣ ವಿದ್ಯಾ ಉಚಿತ ಶಕ್ತಿ ಚಿಕಿತ್ಸಾ ಶಿಬಿರವು ನಡೆಯಿತು. ಕಾರ್ಯಕ್ರಮವನ್ನು ವಿಜಯ್ ಕೊಡವೂರು ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಶ್ರೀ ಅತೀಶ್ ಅವರು ಯೋಗ ಪ್ರಾಣ ವಿದ್ಯಾ ಉಚಿತ ಶಕ್ತಿ ಚಿಕಿತ್ಸಾ ವಿಧಾನದ ಬಗ್ಗೆ ಪರಿಚಯಿಸಿದರು.
ನಂತರ, ಕಾರ್ಯಕ್ರಮದಲ್ಲಿ ಭಾಗವಹಿಸಿದ ವ್ಯಕ್ತಿಗಳ ಶಾರೀರಿಕ ತೊಂದರೆಗಳನ್ನು ಪರಿಹರಿಸಲು ಅವರಿಗೆ ಉಚಿತ ಯೋಗ ಪ್ರಾಣ ವಿದ್ಯಾ ಚಿಕಿತ್ಸೆಗಳನ್ನು ನೀಡಲಾಯಿತು. ಚಿಕಿತ್ಸೆಯನ್ನು ಪಡೆದುಕೊಂಡ ಅನೇಕರು ಚಿಕಿತ್ಸೆಯು ಉತ್ತಮವಾದ ಪರಿಣಾಮ ಬೀರಿದ ಬಗ್ಗೆ ಪ್ರತಿಕ್ರಿಯಿಸಿದರು. ಚಿಕಿತ್ಸೆಯನ್ನು ನೀಡುವಲ್ಲಿ ಯೋಗ ಪ್ರಾಣ ವಿದ್ಯಾ ಚಿಕಿತ್ಸಕರಾದ ಶ್ರೀಮತಿ ಶ್ವೇತಾ ಮತ್ತು ತರಬೇತುದಾ ಆನಂದ್ ಸಹಕರಿಸಿದರು.