ಎಸ್‌ಐಆರ್‌ಸಿ ಉಡುಪಿ ಶಾಖೆಯಿಂದ ಮಹಿಳಾ ದಿನ ಆಚರಣೆ

ಉಡುಪಿ: ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) ಇದರ ದಕ್ಷಿಣ ಭಾರತ ಪ್ರಾದೇಶಿಕ ಮಂಡಳಿಯ (ಎಸ್‌ಐಆರ್‌ಸಿ) ಉಡುಪಿ ಶಾಖೆಯ ಮತ್ತು ಮಹಿಳಾ ಸದಸ್ಯರ ಸಬಲೀಕರಣ ನಿರ್ದೇಶನಾಲಯ, ಐಸಿಎಐ, ನವದೆಹಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಮಾರ್ಚ್ 8ರಂದು ಕುಂಜಿಬೆಟ್ಟಿನ ಐಸಿಎಐ ಭವನದಲ್ಲಿ ಆಚರಿಸಿತು. 

 

ಉಡುಪಿ ಶಾಖೆಯ ಅಧ್ಯಕ್ಷ ಸಿಎ ಪ್ರದೀಪ್ ಜೋಗಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಶಾಖೆಯ ಉಪಾಧ್ಯಕ್ಷ ಮತ್ತು ಸಿಕಾಸಾ ಅಧ್ಯಕ್ಷರು ಸಿಎ ಕವಿತಾ ಎಂ ಪೈ ಟಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಕೀಲೆ ವಿಜಯಲಕ್ಷ್ಮಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಅಧ್ಯಕ್ಷ ಸಿಎ ಪ್ರದೀಪ್ ಜೋಗಿ ಸ್ವಾಗತಿಸಿ, ತಮ್ಮ ಭಾಷಣದಲ್ಲಿ ಮಹಿಳೆಯರನ್ನು ಎಲ್ಲಿ ಗೌರವಿಸಲಾಗುತ್ತದೆ, ಅಲ್ಲಿ ದೈವತ್ವ ಅರಳುತ್ತದೆ ಎಂದು ಹೇಳಿದರು. ವಿಜಯಲಕ್ಷ್ಮಿ ಮಾತನಾಡಿ, ಬಲವಾದ ಮಹಿಳೆ ತನಗಾಗಿ ನಿಲ್ಲುತ್ತಾರೆ. ಬಲಿಷ್ಠ ಮಹಿಳೆ ಎಲ್ಲರಿಗಾಗಿ ನಿಲ್ಲುತ್ತಾರೆ ಎಂದು ಹೇಳಿದ್ದಾರೆ. ಸಿಎ ಸುಪ್ರಿಯಾ ವಿನಯ್ ನಿರೂಪಿಸಿದರು, ಸಿಎ ಕವಿತಾ ಎಂ ಪೈ ಟಿ ವಂದಿಸಿದರು.

ಸಿಎ ಆಂಡ್ರಿಯಾ ಎಸ್ ಲೂಯಿಸ್ ತಾಂತ್ರಿಕ ಅಧಿವೇಶನ ಮತ್ತು ಶರೋಲ್ ಗೋರ್ಜಿನ್ ಕ್ವಾಡ್ರೋಸ್ ಮತ್ತು ಕರೋಲ್ ಫ್ರೀಡಾ ಕ್ವಾಡ್ರೊಸ್, ಸಿಎಗಳು ಮತ್ತು ಮಹಿಳಾ ಸಿಎ ವಿದ್ಯಾರ್ಥಿಗಳಿಗೆ ಸ್ವರಕ್ಷಣೆ ತರಬೇತಿ ನೀಡಿದರು. 

 
 
 
 
 
 
 
 
 
 
 

Leave a Reply