ಉಡುಪಿ ಜಿಲ್ಲಾ ಮೋದಿ ಬ್ರಿಗೇಡ್ ನಿಂದ ಮಹಿಳಾ ಸಾಧಕರಿಗೆ ಸನ್ಮಾನ

ಉಡುಪಿ: ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಜಿಲ್ಲಾ ಮಹಿಳಾ ಮೋದಿ ಬ್ರಿಗೇಡ್‌ನಲ್ಲಿ ಸಮಾಜದಲ್ಲಿ ಸಾಧನೆಗೈದವರಿಗೆ ಹಾಗೂ ವಿಕಲ ಚೇತನರಿಗೆ ಅವರವರ ಮನೆಗಳಲ್ಲಿ ಸಮ್ಮಾನಿಸಲಾಯಿತು.

ಕೃಷಿ ಮತ್ತು ಹೈನುಗಾರಿಕೆಯಲ್ಲಿ ಸಾಧನೆ ಮಾಡಿದ ಉಡುಪಿ ತಾಲೂಕಿನ ಕುತ್ಪಾಡಿಯ 65 ವರ್ಷದ ಮೇರಿದಾಂತಿ, ಸಾಮಾಜಿಕ ಮತ್ತು ರಾಜಕೀಯ ರಂಗದಲ್ಲಿ ಸಾಧನೆಗೈದ ಸರಸ್ವತಿ ಕನ್ನರ್ಪಾಡಿ, ಆಯಿಷಾ ಕಾರ್ಕಳರ ಸಾಮಾಜಿಕ ಕ್ಷೇತ್ರದಲ್ಲಿನ ಸಾಧನೆಗೆ ಮತ್ತು ಮೂರು ಜನ ವಿಕಲ ಚೇತನರಿಗೆ ಗೌರವಿಸಲಾಯಿತು.

ಮೋದಿ ಬ್ರೀಗೇಡ್‌ನ ರಾಜ್ಯ ಕಾರ್ಯದರ್ಶಿ ನೀತಾ ಪ್ರಭು, ಜಿಲ್ಲಾ ಅಧ್ಯಕ್ಷ ಸುಭಾಷಿತ್ ಕುಮಾರ್, ಕಾರ್ಯದರ್ಶಿ ಗಣೇಶ್ ಪಾಟೀಲ್, ಜೊತೆ ಕಾರ್ಯದರ್ಶಿ ಮಾಬೆನ್ ಸುಂದರಾಜ್, ಜೊತೆ ಕಾರ್ಯದರ್ಶಿ ಚಂದ್ರಕಾಂತ್, ಕೋಶಾಧಿಕಾರಿ ಉದಯ ಶೆಣೈ, ಮಹಿಳಾ ಅಧ್ಯಕ್ಷೆ ವೇದಾವತಿ ಹೆಗ್ಡೆ, ಮಹಿಳಾ ಕಾರ್ಯದರ್ಶಿ ಸುಮನಾ ಶೆಟ್ಟಿ ಹಾಗೂ ಸದಸ್ಯರು ಉಪಸ್ಥಿತರಿದ್ದರು, ನೀತಾ ಪ್ರಭು ವಂದಿಸಿದರು.

 
 
 
 
 
 
 
 
 
 
 

Leave a Reply