ಯು.ಪಿ.ಎಂ.ಸಿ- ಯುವದಿನಾಚರಣೆ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಜನವರಿ 12 ರಂದು ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆಯ ಪ್ರಯುಕ್ತ ಯುವದಿನಾಚರಣೆ ಕಾರ್ಯಕ್ರಮವನ್ನು ರಾಷ್ಟ್ರೀಯ ಯೋಜನಾ ಘಟಕದ ಮೂಲಕ ಹಮ್ಮಿಕೊಳ್ಳಲಾಯಿತು. ಬಸ್ರೂರು ಶಾರದಾ ಕಾಲೇಜಿನ ನಿವೃತ ಪ್ರಾಚಾರ್ಯರಾದ ಶ್ರೀಮತಿ ಚಂದ್ರಪ್ರಭಾ ಹೆಗ್ಡೆಯವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಭಾರತ ನಿರ್ಮಾಣದ ದೃಢ ಸಂಕಲ್ಪವನ್ನ ಹೊಂದಿ ಸಿಕ್ಕಂತ ಅವಕಾಶವನ್ನ ಸದುಪಯೋಗ ಪಡಿಸಿಕೊಂಡು ಮೆರೆದಾಗ ಆ ಸಂಕಲ್ಪವನ್ನು ಸಾಕಾರತೆಯತ್ತ ಕೊಂಡೊಯ್ಯುವ ಬಗೆಯನ್ನು ಶ್ರೀ ಸ್ವಾಮಿ ವಿವೇಕಾನಂದರು ತಮ್ಮ ಜೀವನದಲ್ಲಿ ಸಾಧಿಸಿ ತೋರಿಸಿದ್ದಾರೆ ಎಂಬುದನ್ನ ಈ ಸಂದರ್ಭದಲ್ಲಿ ವಿವರಿಸಿದರು.
ಕಾಲೇಜಿನ ಪ್ರಾಚಾರ್ಯರಾದ ಡಾ.ಮಧುಸೂದನ ಭಟ್ ಅಧ್ಯಕ್ಷರಾಗಿದ್ದರು. ಎನ್.ಎಸ್. ಎಸ್ ಘಟಕದ ಯೋಜನಾಧಿಕಾರಿ ಶ್ರೀ ರಾಜೇಶ್ ಕುಮಾರ್ ಉಪಸ್ಥಿತರಿದ್ದರು. ದ್ವಿತೀಯ ಬಿಬಿಎ ನ ಪ್ರಣೀತಾ ಮತ್ತು ಲೋಕೇಶ್ ಎಂ. ವಿವೇಕಾನಂದರ ಕುರಿತು ಭಾಷಣ ಮಾಡಿದರು, ಆಶಿಕಾ ಮತ್ತು ಬಳಗದವರು ವಿವೇಕಾನಂದರ ಕುರಿತಂತೆ ಹಾಡಿದರು. ಲಕ್ಷ್ಮೀ ಸ್ವಾಗತಿಸಿದರು, ರಕ್ಷಿತಾ ವಂದಿಸಿದರು, ದಿಯಾ ಪಾಟ್ಕರ್ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply