ಯು.ಪಿ.ಎಂ.ಸಿ- ಎನ್.ಎಸ್.ಎಸ್ ಶಿಬಿರ ಅಂತಃರಂಗದ ಸೂಚನೆಯಂತೆ ಸೇವೆಗೆ ಕರೆ

ಸೇವೆ ಯಾಕೆ ಮಾಡಬೇಕು,ಎಲ್ಲಿ ಮಾಡಬೇಕು, ಯಾವಾಗ ಮಾಡಬೇಕು, ಯಾರಿಗೆ ಮಾಡಬೇಕು ಇಷ್ಟು ವಿಚಾರದಲ್ಲೂ ನಮ್ಮ ಅಂತಃರಂಗ ಹೇಳುವ ಸೂಚನೆಯಂತೆ ಮಾಡಬೇಕು. ಯಾರೂ ಹೇಳದೇ, ಕೇಳದೇ ನಾವೇ ಮಾಡುವ ಸೇವೆಯೇ ಉತ್ತಮ ಸೇವೆ.

ಅದಕ್ಕಾಗಿ ಪರೋಪಕಾರ ಮಾಡಲು ಇಚ್ಚಿಸುವ ಮನಸ್ಸು ಉತ್ತಮ ಸೇವೆಯಾಗುತ್ತದೆ ಎಂದು ಕಟಪಾಡಿ ಎಸ್.ವಿ.ಎಸ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಸುಬ್ರಹ್ಮಣ್ಯ ತಂತ್ರಿ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಎನ್.ಎಸ್.ಎಸ್ ವಾರ್ಷಿಕ ವಿಶೇಷ ಶಿಬಿರದಲ್ಲಿ ನುಡಿದರು.

ಈ ಸಂದರ್ಭದಲ್ಲಿ ಕಾಲೇಜಿನ ಉಪಪ್ರಾಂಶುಪಾಲೆ ಶ್ರೀಮತಿ ಆಶಾಕುಮಾರಿ ಅಧ್ಯಕ್ಷತೆ ವಹಿಸಿದ್ದರು, ಸಂಯೋಜನಾಧಿಕಾರಿ ರಾಜೇಶ್ ಕುಮಾರ್ ಉಪಸ್ಥಿತರಿದ್ದರು. ಲೋಕೇಶ್ ಸ್ವಾಗತಿಸಿದರು, ಯಶಸ್ವಿನಿ ವಂದಿಸಿದರು, ಪ್ರಣಿತಾ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply