ಉಡುಪಿ ಬನ್ನಂಜೆಯಲ್ಲಿ 5o ನೇ ಭಜನಾ ತರಬೇತಿ

ಉಡುಪಿ: ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹಾಗು ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಇದರ ಆಶ್ರಯದಲ್ಲಿ ,ಶ್ರೀ ಮಹಾಮಾಯಿ ಭಜನಾ ಮಂಡಳಿ ಈಶ್ವರ ನಗರ ಮಣಿಪಾಲ ಇದರ ಅಧ್ಯಕ್ಷರಾದ ಶ್ರೀಮತಿ ಮಾಯಾ ಕಾಮತ್ 50 ನೇ ಭಜನಾ ತರಬೇತಿ ಕಾರ್ಯಕ್ರ್ರಮ ನೆಡೆಸಿಕೊಟ್ಟರು.

ಬನ್ನಂಜೆ ದೇವಳದ ಸಭಾಂಗಣದಲ್ಲಿ ಶನಿವಾರ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಹರೀಶರಾಮ್ ಬನ್ನಂಜೆ ದೀಪ ಬೆಳಗಿಸಿ ಚಾಲನೆ ಶುಭ ಹಾರೈಸಿದರು ಪ್ರತಿ ಶನಿವಾರ, ಆದಿತ್ಯವಾರ ಸಂಜೆಯ ಭಜನಾ ತರಬೇತಿಯಲ್ಲಿ ಎಲ್ಲರೂ ಸಕ್ರಿಯ ರಾಗಿ ಭಾಗವಹಿಸುವಂತೆ ತಿಳಿ ಹೇಳಿದರು ವಿಶೇಷ ಸಾಧನೆ ಹಾಗು ಸಮಾಜ ಸೇವೆಗೈದ ಗಿರಿಜಾ ಕಾಮತ್ ಇಂದ್ರಾಳಿ , ಪ್ರೇಮ ಶೆಟ್ಟಿ ರವರನ್ನು ಗೌರವಿಸಲಾಯಿತು , ಬಿಜೆಪಿ ಉಡುಪಿ ಜಿಲ್ಲಾ ಮಹಿಳಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಶೆಟ್ಟಿ ,ಬಿಜೆಪಿ ಉಡುಪಿ ಜಿಲ್ಲಾ ಅಧ್ಯಕ್ಷರಾದ ಸುರೇಶ ನಾಯಕ್ , ನಗರ ಸಭಾ ಸದಸ್ಯರಾದ ಸವಿತಾ ಹರೀಶ್ ರಾಮ್, ಅರ್ಚಕ ಮಧುಸೂದನ ಉಪಾಧ್ಯ , ಶ್ರುತಿ ಶೆಣೈ , ಅಶ್ವಿನಿ ಶೆಟ್ಟಿ , ಮೋಹನ್ ಭಟ್ ,ಪೂರ್ಣಿಮಾ ಶೆಟ್ಟಿ , ಪ್ರಮೀಳಾ ಹರೀಶ್ , ರಶ್ಮಿತಾ ಶೆಟ್ಟಿ , ಹಾಗು ವಿವಿಧ ಮಂಡಳಿಯಿಂದ ಭಜನಾ ಮಂಡಳಿಯ ಸದ್ಯಸ್ಯರು ಉಪಸ್ಥರಿದ್ದರು ,ಶೋಭಾ ಶೆಟ್ಟಿ ಸ್ವಾಗತಿಸಿದರು ,ಸವಿತಾ ಶೆಟ್ಟಿ ನಿರೂಪಣೆಗೈದರು

 
 
 
 
 
 
 
 
 
 
 

Leave a Reply