ಉಡುಪಿ ಶ್ರೀಕೃಷ್ಣ ಮಠಕ್ಕೆ ಬಂದಿದ್ದ ಭಕ್ತನೋರ್ವ ಬಾವಿಗೆ ಬಿದ್ದ ಘಟನೆಯೊಂದು ನಡೆದಿದೆ. ಸಂತೋಷ್ ಎಂಬುವವರು ಬಾವಿಗೆ ಬಿದ್ದಿದ್ದು, ಇವರು ಬಾಗಲಕೋಟೆ ಮೂಲದವರೆಂದು ತಿಳಿದು ಬಂದಿದೆ. ಈ ಘಟನೆ ಗುರುವಾರ ಸಂಜೆ ನಡೆದಿದೆ.
ಗುರುವಾರ ಶೀರಿಬೀಡು ಬಳಿ ಆವರಣದಲ್ಲಿರುವ ಬಾವಿ ಬಳಿ ಕುಳಿತಿದ್ದ ಇವರು ಆಯತಪ್ಪಿ ಬಾವಿಗೆ ಉರುಳಿ ಬಿದ್ದಿದ್ದಾರೆ. ಕೂಡಲೇ ಸ್ಥಳೀಯರು ಬಾವಿಗೆ ಬಿದ್ದ ವ್ಯಕ್ತಿಯ ರಕ್ಷಣೆ ಮಾಡಿದ್ದಾರೆ. ಬಾವಿಯಲ್ಲಿ ನೀರು ಕಡಿಮೆ ಇದ್ದ ಕಾರಣ ನಿತ್ಯಾನಂದ ಒಳಕಾಡು ಅವರು ಬಾವಿಗೆ ಹಗ್ಗ ಇಳಿಬಿಟ್ಟು ಸ್ಥಳೀಯರ ಸಹಾಯದಿಂದ ಮೇಲಕ್ಕೆತ್ತಿದ್ದಾರೆ. ಸಂತೋಷ್ ಗಾಯಗೊಂಡಿದ್ದು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.