ಉಡುಪಿ : ವೃದ್ಧರ ವಾರಸುದಾರರಿಗೆ ಸೂಚನೆ

ಉಡುಪಿ : ನಗರದ ಶಂಕರಪುರ ಪರಿಸರದ ಹೋಟೆಲ್ ಒಂದರಲ್ಲಿ ಕಾರ್ಮಿಕ ಕೆಲಸ ಮಾಡಿಕೊಂಡು ಅಲ್ಲಿಯೇ ಆಶ್ರಯ ಪಡೆದಿದ್ದ ನರಸಿಂಹ ಮುದ್ದು ಪಾಟ್ಕರ್ (60) ಎಂಬ ವೃದ್ಧರ ಸಂಬoಧಿಕರು ಪತ್ತೆಯಾಗದ ಹಿನ್ನೆಲೆ, ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಜಿಲ್ಲಾ ಯೋಜನಾ ಸಂಯೋಜಕಿ ಅಶ್ವಿನಿ ಬೆಳ್ಮಾರು ಹಾಗೂ ಆಪ್ತ ಸಮಾಲೋಚಕ ರೋಶನ್ ಕೆ ಅಮೀನ್ ಅವರು ಆಶ್ರಯಕ್ಕಾಗಿ ಕಟಪಾಡಿಯ ಕಾರುಣ್ಯ ವೃದ್ಧಾಶ್ರಮಕ್ಕೆ ದಾಖಲಿಸಿರುತ್ತಾರೆ.

ಮೂಲತಃ ಮಹಾರಾಷ್ಟ್ರ ಮೂಲದವರಾದ ವೃದ್ಧರ ವಾರಾಸುದಾರರು ಯಾರಾದರೂ ಇದ್ದಲ್ಲಿ ಹಿರಿಯ ನಾಗರಿಕರ ಸಹಾಯವಾಣಿ

ಕೇಂದ್ರ ದೂ.ಸಂಖ್ಯೆ: 1090 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

 
 
 
 
 
 
 
 
 
 
 

Leave a Reply