ಬೆದರಿಸಿ 5ಕೆಜಿ ಚಿನ್ನ ಎಗರಿಸಿದ್ದ 7 ಮಂದಿ ಅಂದರ್

ಬೆಂಗಳೂರು : ಲಾಂಗ್ ತೋರಿಸಿ 5 ಕೆಜಿ ಚಿನ್ನ ಎಗರಿಸಿದ್ದ 7 ಖದೀಮರ ತಂಡವನ್ನು ಹೆಡೆಮುರಿಕಟ್ಟುವಲ್ಲಿ ಹಲಸೂರು ಗೇಟ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. 
ನವಂಬರ್ 19ರಂದು ಸಂಸ್ಕಾರ್ ಎಂಟರ್ಪ್ರೈಸಸ್ ಮಾಲೀಕ ಅಟ್ಟಿಕಾ ಗೋಲ್ಡ್ ಕಂಪನಿಯಲ್ಲಿ ಚಿನ್ನದ ಗಟ್ಟಿಗಳನ್ನು ಖರೀದಿಸಿ ವಾಪಸ್ಸಾಗುತ್ತಿದ್ದ ವೇಳೆ ಹಲಸೂರು ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ರಾಜ್ ಹೋಟೆಲ್ ಹತ್ತಿರ ಸಿನಿಮೀಯ ರೀತಿಯಲ್ಲಿ ಬಂದ 7 ಖದೀಮರು, ಲಾಂಗ್ ತೋರಿಸಿ 5 ಕೆಜಿ ಚಿನ್ನವನ್ನು ಎಗರಿಸಿ ಪರಾರಿಯಾಗಿದ್ದರು.

ಈ ಕುರಿತು ದೂರು ದಾಖಲಿಸಿಕೊಂಡಿದ್ದ ಹಲಸೂರು ಗೇಟ್ ಪೊಲೀಸರು, ಆರೋಪಿಗಳಾದ ಮೊಹಮ್ಮದ್ ಪರಾನ್, ಹಂಜುಮ್, ಮೊಹಮ್ಮದ್ ಹುಸೇನ್, ಮೊಹಮ್ಮದ್ ಅರಿಫ್, ಸೊಹೈಲ್ ಬೇಗ್, ಶಾಹಿದ್ ಅಹ್ಮದ್ ಹಾಗೂ ಉಮೇಶ್ ಎನ್ನುವವರನ್ನು ಬಂಧಿಸಿ 5 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.  

ಪೊಲೀಸರ ಕಾರ್ಯಾಚರಣೆಗೆ ಶ್ಲಾಘನೆ ವ್ಯಕ್ತಪಡಿಸಿರುವ ಕಮಿಷನರ್ ಕಮಲ್ ಪಂತ್, ತನಿಖಾ ತಂಡಕ್ಕೆ 70 ಸಾವಿರ ರೂ. ಬಹುಮಾನ ಘೋಷಿಸಿದ್ದಾರೆ.

 
 
 
 
 
 
 
 
 
 
 

Leave a Reply