ಎಸ್.ವಿ.ಎಚ್. ಕನ್ನಡ ಮಾಧ್ಯಮ ಪ್ರೌಢಶಾಲೆ, ಇನ್ನಂಜೆ ಇಲ್ಲಿಯ 8ನೇ ತರಗತಿಯ 40 ವಿದ್ಯಾರ್ಥಿಗಳಿಗೆ ಸಂಸ್ಥೆಯ ಹಳೆ ವಿದ್ಯಾರ್ಥಿ ಚಿತ್ರಕಲಾವಿದ ಹಾಗೂ ನಿವೃತ್ತ ಅದ್ಯಾಪಕರಾದ ಶ್ರೀ ಸಕು ಪಾಂಗಾಳ ಇವರು ತನ್ನ ಪೂಜ್ಯರಾದ ದಿ| ರಾಜೀವಿ ರಾಮಕೃಷ್ಣ ಭಟ್ ಪಾಂಗಾಳ ಇವರ ನೆನಪಿಗಾಗಿ ಸ್ಕೂಲ್ ಅಟ್ಲಾಸ್ ನೀಡಿದರು. ಹಾಗೂ ಮಕ್ಕಳಿಗೆ ಅಟ್ಲಾಸ್ನ ಉಪಯೋಗದ ಬಗ್ಗೆ ತಿಳಿಸಿದರು.
ಹಿರಿಯ ಶಿಕ್ಷಕರಾದ ನಟರಾಜ ಉಪಾದ್ಯ ಸ್ವಾಗತಿಸಿದರು. ಸಂಸ್ಕೃತ ಶಿಕ್ಷಕರಾದ ಪ್ರಭಾಕರ ಭಟ್ ಇವರು ವಂದಿಸಿದರು. ಸಂಸ್ಥೆಯ ಎಲ್ಲಾ ಶಿಕ್ಷಕರು ಉಪಸ್ಥಿತರಿದ್ದರು.