ಕಂಬಳ ಓಟಗಾರನ ವಿಷಯಕ್ಕೂ, ಶ್ರೀರಾಮಸೇನೆಗೂ ಸಂಬಂದವಿಲ್ಲ~ಜಯರಾಂ ಅಂಬೆಕಲ್ಲು ಸ್ಪಷ್ಟನೆ

ಕಂಬಳ ಓಟಗಾರ ಶ್ರೀನಿವಾಸಗೌಡರಿಗೆ ಬೆದರಿಕೆ ಕರೆಯ ಬಗ್ಗೆ ಶ್ರೀರಾಮಸೇನೆ ಕಾರ್ಯಕರ್ತನಿಂದ ಅವಾಚ್ಯ ಪದಗಳಿಂದ ನಿಂದನೆ, ದೂರು ದಾಖಲು ಎಂಬಿತ್ಯಾದಿ ವಿಷಯಗಳು ಮಾದ್ಯಮ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಬರುತ್ತಿರುವುದು ಸತ್ಯಕ್ಕೆ ದೂರವಾಗಿದ್ದು, ಇದು ನಮ್ಮ ಸಂಘಟನೆಯ ಕಾರ್ಯಕರ್ತರಲ್ಲಿ ಕಳವಳ ಉಂಟುಮಾಡಿದೆ.

ಶ್ರೀ ರಾಮ ಸೇನೆ ಸಂಘಟನೆಗೂ ಈ ವಿಷಯ ಕ್ಕೂ ಯಾವುದೇ ಸಂಬಂಧವಿಲ್ಲವೆಂದು ಶ್ರೀರಾಮಸೇನೆಯ ಉಡುಪಿ ಜಿಲ್ಲಾಧ್ಯಕ್ಷ ಜಯರಾಂ ಅಂಬೆಕಲ್ಲು ಸ್ಪಷ್ಟಪಡಿಸಿದ್ದಾರೆ.

ಪ್ರಶಾಂತ್ ಬಂಗೇರ ಎಂಬವರು ರಾಮ್ ಸೇನಾ ಸಂಘಟನೆ ಯ ಜವಾಬ್ದಾರಿಯ ಮುಖಂಡ ರಾಗಿದ್ದು, ಶ್ರೀರಾಮ ಸೇನೆಗೂ ರಾಮಸೇನಾಗೂ ಯಾವುದೇ ಸಂಬಂಧ ವಿರುವುದಿಲ್ಲ.

ಹಾಗೂ ಈ ಘಟನೆಯ ಸಂಬಂದ ಇಬ್ಬರೂ ಕಂಬಳ ಪ್ರೇಮಿಗಳಾಗಿರುವುದರಿಂದ, ಮತ್ತು ಅಚಾನಕ್ ಆಗಿರುವ ತಪ್ಪನ್ನು ಮಾನ್ಯ ಶಾಸಕರೂ, ಕಂಬಳದ ಮುಖಂಡರಾದ ಶಾಸಕರಾದ ಉಮಾನಾಥ್ ಕೋಟ್ಯಾನ್ ಮತ್ತು ಕಂಬಳ ಮುಖಂಡರುಗಳು ಬಗೆಹರಿಸಬೇಕು ಎಂದು ಉಡುಪಿ ಜಿಲ್ಲಾ ಶ್ರೀರಾಮಸೇನೆಯು ಸಂಬಂಧ ಪಟ್ಟವರನ್ನು ಆಗ್ರಹಿಸುತ್ತದೆ.

 
 
 
 
 
 
 
 
 
 
 

Leave a Reply