ಪುತ್ತಿಗೆ ಶ್ರೀಗಳ ಕೋಟಿಗೀತಾ ಲೇಖನ ಯಜ್ಞಕ್ಕೆ ಛಾಯಾಗ್ರಾಹಕರು ಸಾಥ್

ಸೌತ್ ಕೆನರಾ ಫೋಟೋಗ್ರಾಫ್ರ್ಸ್ ಅಸೋಸಿಯೇಷನ್ ವತಿಯಿಂದ ವಿಟ್ಲ ಪಿಂಡಿಯ ದಿನದಂದು ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥರ ಚತುರ್ಥ ಪರ್ಯಾಯದ ಬೃಹತ್ ಯೋಜನೆಯಾದ ಕೋಟಿ ಗೀತಾ ಲೇಖನ ಯಜ್ಞದ ಬಗ್ಗೆ ಪ್ರಚಾರ ಹಾಗೂ ಗೀತಾ ಆಂದೋಲನ ನಡೆಸಲ್ಪಟ್ಟಿತು.

 ಶ್ರೀಗಳಿಂದ ನಿಯೋಜಿತ ಪ್ರದ್ಯುನ ತಂಡದ ರಮೇಶ್ ಭಟ್ ಕೆ ಈ ಯೋಜನೆಯ ರೂಪು ರೇಷೆಗಳನ್ನು ವಿವರಿಸಿದರು. 

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಉಡುಪಿ ವಲಯದ ಅಧ್ಯಕ್ಷ ಶ್ರೀ ಜನಾರ್ದನ ಕೊಡವೂರು ಮಾತನಾಡಿ ಪುತ್ತಿಗೆ ಶ್ರೀಗಳವರ ಎಲ್ಲಾ ಯೋಜನೆಗಳಲ್ಲೂ ನಾವೆಲ್ಲರೂ ಭಕ್ತಿ ಪೂರ್ವಕ ಸೇವೆ ಸಲ್ಲಿಸುವುದಾಗಿಯೂ ಈ ಲೇಖನ ಯಜ್ಞದಲ್ಲೂ ನಾವೆಲ್ಲ ಸದಸ್ಯರಾಗುವೆವು ಎಂದು ಭರವಸೆ ನೀಡಿದರು.

 ಗೀತಾ ಪ್ರಚಾರಕರಾದ ಶ್ರೀ ಸುರೇಶ್ ಕಾರಂತ್, ಶ್ರೀ ಕೆ. ವಿ.ಉಡುಪ ii ಸಂದರ್ಭದಲ್ಲಿ ಅಸೋಸಿಯೇಷನ್ ಕೋಶಾಧಿಕಾರಿ ದಿವಾಕರ್ ಹಿರಿಯಡ್ಕ, ಸುರಭಿ ರತನ್, ಸಂದೀಪ್ ಕಾಮತ್, ಸುಕೇಶ್ ಅಮೀನ್, ಸಂತೋಷ್ ಕೊರಂಗ್ರಪಾಡಿ, ಎಂ.ಎಸ್ ಮಂಜು, ಅಂಬಾ ರಮೇಶ್,

ಫೋಕಸ್ ರಾಘು, ಅಶೋಕ್ ದೊಂಡೆ ರಂಗಡಿ, ಪ್ರಸಾದ್ ಜತ್ತನ್ ಹಾಗು ಮತ್ತಿತರರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply