ಜನಪರ ಸರಕಾರ ನಡೆಸಲು ಬಾರದಿದ್ದರೆ ಈ ಕೂಡಲೇ ರಾಜೀನಾಮೆ ಕೊಟ್ಟು ತೊಲಗಲಿ – ಡಬ್ಲ್ಯುಪಿಐ ವಿಜಯ್ ಆಗ್ರಹ

ಉಡುಪಿ: ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಧಿಸಿರುವ ಲಾಕ್’ಡೌನ್ ಗೆ ಜನ ಈಗಾಗಲೇ ಕಂಗಾಲಾಗಿದ್ದು ಅದರ ನಡುವೆ ಇದೀಗ ವಿದ್ಯುತ್ ದರ ಏರಿಕೆ ಮಾಡಿ ಜನರಿಗೆ ಮತ್ತಷ್ಟು ಆಘಾತ ನೀಡಲಾಗಿದೆ ಎಂದು ವೆಲ್ಫೇರ್ ಪಾರ್ಟಿಯ ಉಡುಪಿ ಜಿಲ್ಲಾ ಉಪಾಧ್ಯಕ್ಷ ವಿಜಯ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಿ ಜನಪರ ಎನಿಸಿಕೊಳ್ಳಬೇಕಾದ ಸರಕಾರ ವಿಶ್ವಾಸ ದ್ರೋಹ ಎಸಗುತ್ತಿದೆ. ಕೇವಲ ಘೋಷಣೆ, ಭಾಷಣದಲ್ಲಿ ನಿರತರಾಗಿರುವ ಪ್ರಧಾನ ಮಂತ್ರಿಗಳು, ಮುಖ್ಯಮಂತ್ರಿಗಳು ದಿನದಿಂದ ದಿನಕ್ಕೆ ಜನರ ಶೋಷಣೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.ಕಿಂಚಿತ್ತು ಪರಿಹಾರ ನೀಡಿ ಕೈ ತೊಳೆದುಕೊಂಡಿರುವ ಸರಕಾರ ಪೆಟ್ರೋಲ್, ಡಿಸೇಲ್ ಬೆಲೆ ಏರಿಸಿ ಜನರ ಸಹನೆಯ ಪರೀಕ್ಷೆ ನಡೆಸುತ್ತಿದೆ.ಇದೀಗ ಗಾಯದ ಮೇಲೆ ಬರೆಯೆಂಬಂತೆ ವಿದ್ಯುತ್ ದರ ಹೆಚ್ಚಿಸಿರುವುದು ನಿಜಕ್ಕೂ ಆಘಾತಕಾರಿ ಎಂದಿದ್ದಾರೆ. 

ಈ ಕೋರೊನಾ ಸಂದರ್ಭದಲ್ಲಿ ಸೂಕ್ತ ವೈದ್ಯಕೀಯ ಸೌಲಭ್ಯ ನೀಡುವಲ್ಲಿ ಸೋತ ಸರಕಾರ ಸಾವಿರಾರು ಮಂದಿಯ ಜೀವವನ್ನು ಬಲಿಪಡೆಯಿತು.ಇದೀಗ ಅಗತ್ಯ ವಸ್ತುಗಳ ಬೆಲೆ ಏರಿಸಿ ಜೀವಂತ ಇರುವ ಜನರ ಜೀವ ಹಿಂಡುತ್ತಿದೆ.ಜನಪರವಾದ ಸರಕಾರ ನಡೆಸಲು ಬಾರದಿದ್ದರೆ ಈ ಕೂಡಲೇ ರಾಜೀನಾಮೆ ಕೊಟ್ಟು ತೊಲಗಲಿ.ಅದು ಬಿಟ್ಟು ಜನರ ಸಹನೆಯನ್ನು‌ ಮತ್ತಷ್ಟು ಪರೀಕ್ಷಿಸಬಾರದೆಂದು ಆಗ್ರಹಿಸಿದ್ದಾರೆ.

 
 
 
 
 
 
 
 
 

Leave a Reply